ಮಾಧ್ಯಮ ನಮ್ಮ ಪಾಲಿಗೆ ಎಚ್ಚರಿಕೆ ಕರೆಗಂಟೆ: ಮುಖ್ಯಮಂತ್ರಿ
Update: 2019-11-16 12:20 GMT
ಬೆಂಗಳೂರು, ನ.16: ಪತ್ರಿಕೋದ್ಯಮದಲ್ಲಿರುವ ಮಿತ್ರರಿಗೆಲ್ಲ ರಾಷ್ಟ್ರೀಯ ಪತ್ರಿಕಾ ದಿನದ ಹಾರ್ದಿಕ ಶುಭಾಶಯಗಳು. ಮಾಧ್ಯಮ ನಮ್ಮ ಪಾಲಿಗೆ ಎಚ್ಚರಿಕೆಯ ಕರೆಗಂಟೆ. ನಮ್ಮ ಮತ್ತು ಜನರ ನಡುವಿನ ಸಂವಹನ ಸೇತುವೆ. ಪತ್ರಕರ್ತರ ಜೀವನ ಮಟ್ಟ ಸುಧಾರಿಸುವ ವಿಷಯದಲ್ಲಿ ನಮ್ಮ ಸರಕಾರ ಬದ್ಧವಾಗಿದೆ. ಆರೋಗ್ಯವಂತ ಸಮಾಜಕ್ಕೆ ಜವಾಬ್ದಾರಿಯುತ ಮಾಧ್ಯಮ ತುಂಬಾ ಅವಶ್ಯಕ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.