ಕಾರು ರಿವರ್ಸ್ ತೆಗೆಯುವ ವೇಳೆ ಢಿಕ್ಕಿ: ಆಟವಾಡುತ್ತಿದ್ದ 2 ವರ್ಷದ ಮಗು ಮೃತ್ಯು

Update: 2019-11-16 17:45 GMT

ಚಾಮರಾಜನಗರ, ನ.16: ಕಾರು ರಿವರ್ಸ್ ತೆಗೆಯುವ ವೇಳೆ ಆಟವಾಡುತ್ತಿದ್ದ ಮಗುವಿಗೆ ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮಗು ಮೃತಪಟ್ಟಿರುವ ಘಟನೆ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಹ್ಯಾಂಡ್ ಪೋಸ್ಟ್ ಬಳಿ ನಡೆದಿದೆ.

ಸತ್ತೇಗಾಲ ಹ್ಯಾಂಡ್ ಪೋಸ್ಟ್​ನ ಚಿಕ್ಕದರ್ಗಾದ ಅಯಾಝ್ ಖಾನ್ ಪುತ್ರಿ ಸೆಹರೀನ್ ತಾಜ್‌ (2) ಮೖತ ಮಗು. ಚಿಕ್ಕದರ್ಗಾದ ಸಮೀಪದಲ್ಲಿ  ಆಟವಾಡುತ್ತಿದ್ದ ವೇಳೆ ಬೆಂಗಳೂರಿನ ದಾಸರಹಳ್ಳಿ ನಿವಾಸಿ ಸೈಯದ್ ಅಬ್ದುಲ್ ಗನಿ ಎಂಬವರು ತನ್ನ ಡಸ್ಟರ್ ಕಾರನ್ನು ರಿವರ್ಸ್​​ ತೆಗೆಯುವ ಸಂದರ್ಭದಲ್ಲಿ ಆಟವಾಡುತ್ತಿದ್ದ ಸೆಹರಿನ್ ತಾಜ್​ಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಸೆಹರೀನ್ ತಾಜ್‌ ತೀವ್ರ ಗಾಯಗೊಂಡು ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.

ಮೃತ ಬಾಲಕಿಯ ತಂದೆ ಅಯಾಝ್ ಖಾನ್ ದೂರಿನ ಮೇರೆಗೆ ಕೊಳ್ಳೇಗಾಲ ಗ್ರಾಮಾಂತರ ಪೊಲೀಸರು ಆರೋಪಿ ಸೈಯದ್ ಅಬ್ದುಲ್​ನನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News