ಮತದಾರರಿಗೆ ರಮೇಶ್ ಚೂರಿ: ಲಖನ್ ಜಾರಕಿಹೊಳಿ

Update: 2019-11-19 17:26 GMT

ಬೆಳಗಾವಿ, ನ.19: ಗೋಕಾಕ್ ಕ್ಷೇತ್ರದ ಜನರು ನಮಗೆ ದೇವರಿದ್ದಂತೆ, ಅವರಿಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಚೂರಿ ಹಾಕಿದ್ದಾರೆ ಎಂದು ಗೋಕಾಕ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಆರೋಪಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಮತಕ್ಷೇತ್ರದ ಜನರೇ ನಮಗೆ ದೇವರಿದ್ದ ಹಾಗೆ. ನಾವು ಎಲ್ಲರೂ ಕುಟುಂಬಸ್ಥರಂತೆ ಇದ್ದೆವು. ಆದರೆ, ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಮಾತ್ರವಲ್ಲದೆ, ನಮ್ಮ ಮತಕ್ಷೇತ್ರದ ಜನರಿಗೂ ಚೂರಿ ಹಾಕಿದರು. ಜನರಿಗೆ ಅನ್ಯಾಯವಾದರೆ ಸುಮ್ಮನೆ ಇರಲ್ಲ ಎಂದರು.

ಕಳೆದ 20 ವರ್ಷದಿಂದ ರಮೇಶ್ ಅವರ ಮಾತು ಕೇಳಿ ಸುಮ್ಮನಾಗಿದ್ದೆವು. ಆದರೆ, ಅವರ ಅಳಿಯಂದಿರ ಭ್ರಷ್ಟಾಚಾರ ಬೆಳಕಿಗೆ ತಂದ ತಕ್ಷಣ ನಮ್ಮನ್ನು ಟೀಕಿಸುತ್ತಿದ್ದಾರೆ ಎಂದು ಲಖನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News