"ಬಿಎಸ್‌ವೈ ನೇತೃತ್ವದ ಬಿಜೆಪಿ ಸರಕಾರವನ್ನು ಬೆಂಬಲಿಸಲು ನಮ್ಮ ಪಕ್ಷಕ್ಕೆ ಎಲ್ಲಾ ಅವಕಾಶ ಇದೆ"

Update: 2019-11-19 17:49 GMT

ಬೆಂಗಳೂರು, ನ. 19: ಡಿಸೆಂಬರ್ 5ರಂದು ನಡೆಯಲಿರುವ ಉಪ ಚುನಾವಣೆ ಫಲಿತಾಂಶದ ಬಳಿಕ ಬಿಜೆಪಿ ಅಲ್ಪ ಮತಕ್ಕೆ ಕುಸಿದರೆ, ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರವನ್ನು ಬೆಂಬಲಿಸುವ ಎಲ್ಲ ಅವಕಾಶ ಇದೆ ಎಂದು ಜೆಡಿಎಸ್‌ನ ಹಿರಿಯ ನಾಯಕ ಬಸವರಾಜ ಹೊರಟ್ಟಿ ಮಂಗಳವಾರ ಪುನರುಚ್ಚರಿಸಿದ್ದಾರೆ.

‘‘ಸರಕಾರ ಉರುಳಲು ನಾವು ಅವಕಾಶ ನೀಡಲಾರೆವು ಎಂದು ಕುಮಾರಸ್ವಾಮಿ ಹಾಗೂ ದೇವೇಗೌಡ ಹೇಳಿದ್ದಾರೆ. ಅವರ ಹೇಳಿಕೆಯ ಆಧಾರದಲ್ಲಿ, ಬಿಜೆಪಿ ಅಲ್ಪ ಮತಕ್ಕೆ ಕುಸಿದರೆ ಮೂರುವರೆ ವರ್ಷದ ಅಂತ್ಯಗೊಳ್ಳುವವರೆಗೆ ಜೆಡಿಎಸ್ ಬೆಂಬಲ ನೀಡುವ ಎಲ್ಲ ಅವಕಾಶ ಇದೆ ಎಂದು ನಾನು ಹೇಳಿದೆ. ನಾನು ಈ ಹೇಳಿಕೆಗೆ ಬದ್ಧವಾಗಿದ್ದೇನೆ’’ ಎಂದು ಹೊರಟ್ಟಿ ಹೇಳಿದರು.

ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್-ಈ ಮೂರು ಪಕ್ಷಗಳ ಯಾವುದೇ ಶಾಸಕರು ಸರಕಾರ ಉರುಳಿಸಲು ಸಿದ್ಧರಿಲ್ಲ. ಯಾಕೆಂದರೆ, ಯಾರು ಕೂಡ ಮಧ್ಯಂತರ ಚುನಾವಣೆ ಬಯಸುತ್ತಿಲ್ಲ ಎಂದು ಅವರು ತಿಳಿಸಿದರು.

ಯಾವುದೇ ಸರಕಾರ ಅಧಿಕಾರದಲ್ಲಿ ಇದ್ದರು ಕೂಡ, ನಮ್ಮ ಶಾಸಕರು ಉಳಿದ ಮೂರುವರೆ ವರ್ಷಗಳ ಕಾಲ ಶಾಸಕರ ಹುದ್ದೆಯಲ್ಲಿ ಇರಲಿದ್ದಾರೆ ಎಂಬುದು ಎಲ್ಲ ಶಾಸಕರಿಗೂ ತಿಳಿದಿದೆ ಎಂದು ಬಸವರಾಜ ಹೊರಟ್ಟಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News