ಶ್ರೀಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅತ್ಯುತ್ತಮ ಆರೋಗ್ಯ ಕೇಂದ್ರ ಪ್ರಶಸ್ತಿ

Update: 2019-11-19 18:29 GMT

ಮಡಿಕೇರಿ,ನ. 19 : ಶ್ರೀಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರವು ತನ್ನ ಅತ್ಯುತ್ತಮ ಸೇವೆಯಲ್ಲಿ ಶೇ. 95 ಕ್ಕೂ ಹೆಚ್ಚು ಪ್ರಗತಿ ಸಾಧಿಸಿ,  ಕೊಡಗಿನಲ್ಲಿ ಅತ್ಯುತ್ತಮ ಆರೋಗ್ಯ ಕೆಂದ್ರ ಎಂಬ ಪ್ರಶಂಸೆಗೆ ಪಾತ್ರವಾಗಿ ಜಿಲ್ಲಾಧಿಕಾರಿಗಳಿಂದ  ಪ್ರಶಸ್ತಿಗಳಿಸಿದೆ. 

ಈ ಆರೋಗ್ಯ ಕೇಂದ್ರವನ್ನು ಕಳೆದ ಕೆಲವು ವರ್ಷಗಳಿಂದ ಕರುಣಾ ಟ್ರಸ್ಟ್ ಗೆ ವಹಿಸಲಾಗಿ ಈ ಭಾಗದ ಬಡ ರೋಗಿಗಳಿಗೆ ಉತ್ತಮ ಸೇವೆ ನೀಡುತ್ತಿದೆ. ಸತತ ಮೂರು ವರ್ಷಗಳಿಂದ ಉತ್ತಮ ಸೇವೆ, ಸ್ವಚ್ಚತೆಗೆ ಸ್ವಚ್ಛ ಭಾರತ ಪಾಲನೆ ಪ್ರಶಸ್ತಿ ಲಭಿಸಿದೆ.

ಈ ಆರೋಗ್ಯ ಕೆಂದ್ರದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಡಾ. ಗೌತಮ್, ಕರುಣಾ ಟ್ರಸ್ಟ್ ನ ಸಿಬ್ಬಂದಿ ಮತ್ತು ಅರೋಗ್ಯ ಕೆಂದ್ರದ ಎಲ್ಲಾ ಸಿಬ್ಬಂದಿ ಹಾಗೂ ಅಭಿವೃದ್ಧಿ ಮಂಡಳಿ ಸದಸ್ಯರು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News