ಎಂಟಿಬಿ ನಾಗರಾಜ್ ಹಣಪಡೆದಿಲ್ಲ ,ಆಪರೇಷನ್ ಕಮಲಕ್ಕೆ ಯಡಿಯೂರಪ್ಪರಿಗೆ ಹಣ ಕೊಟ್ಟಿದ್ದಾರೆ: ಸಿದ್ದರಾಮಯ್ಯ

Update: 2019-11-21 05:11 GMT

ಮೈಸೂರು, ನ.21:  ಆಪರೇಷನ್ ಕಮಲದಲ್ಲಿ ಎಂಟಿಬಿ ನಾಗರಾಜ್ ಹಣ ಪಡೆದಿಲ್ಲ. ಆದರೆ ಅವರು  ಆಪರೇಷನ್ ಕಮಲಕ್ಕೆ ಯಡಿಯೂಪ್ಪನವರಿಗೆ ಸಾಲ ಕೊಟ್ಟಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ  ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು  ಆಪರೇಷನ್ ವೇಳೆ ಅನರ್ಹರಿಗೆ ಹಣ ನೀಡಲು ಎಂಟಿಬಿ ಒಬ್ಬರೇ ಸಾಲಕೊಟ್ಟಿದ್ದಾರೆ .ಅವರು ಒಬ್ಬರು ಹಣ ಪಡೆಯದವರು.     ಈ ಕಾರಣದಿಂದಾಗಿ ಎಂಟಿಬಿ ನಾಗರಾಜ್ ಮೇಲೆ ಯಡಿಯೂರಪ್ಪನವರು ಅತಿಯಾದ ಪ್ರೀತಿ ತೋರಿಸುತ್ತಿದ್ದಾರೆ. ಎಂಟಿಬಿ ನಾಗರಾಜ್ ಗೆಲುವೇ ನನ್ನ ಗೆಲುವು ಎಂದು ಹೇಳುತ್ತಿದ್ದಾರೆ   ಎಂದು ಸಿದ್ದರಾಮಯ್ಯ ನುಡಿದರು.

ಎಂಟಿಬಿ ನಾಗರಾಜ್  ಅವರಿಂದ  ನಾನು ಸಾಲ ಪಡೆದಿಲ್ಲ.  ಸಾಲವನ್ನು ಪಡೆಯದೆ ನಾನು ಏನನ್ನು ವಾಪಸ್ ನೀಡಲಿ. ಕೃಷ್ಣಭೈರೆಗೌಡರು ಪಡೆದಿದ್ದ  ಸಾಲವನ್ನು ವಾಪಸ್ ಕೊಟ್ಟಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಹಣದಾಸೆಗಾಗಿ ಅನರ್ಹ ಶಾಸಕರು ಬಿಜೆಪಿ ಸೇರಿದ್ದಾರೆಂದು ಜನರು ಮಾತನಾಡುತ್ತಿದ್ದಾರೆ . ಜನರು ಅನರ್ಹರನ್ನು ಸಹಿಸಲ್ಲ ಅವರನ್ನು ಸೋಲಿಸುತ್ತಾರೆ ಎಂದರು..

ಸಚಿವ  ಮಾಧುಸ್ವಾಮಿ  ಕುರುಬ ಸಮದಾಯದ ಬಗ್ಗೆ ನೀಡಿರುವ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿದ  ಸಿದ್ದರಾಮಯ್ಯ  ಅವರು "ಮಾಧುಸ್ವಾಮಿ ತಪ್ಪು ಮಾಡಿದ್ದರೆ ಅವರೇ   ಕ್ಷಮೆ ಕೇಳಬೇಕಿತ್ತು. ಪ್ರಕರಣವನ್ನು ಅಲ್ಲಿಗೆ ಮುಗಿಸಬೇಕಿತ್ತು. ಈ ವಿಚಾರದಲ್ಲಿ ಯಡಿಯೂರಪ್ಪ ಯಾಕೆ ಕ್ಷಮೆ ಕೇಳಬೇಕು ಎಂದು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News