BREAKING NEWS | ಐಎನ್ಎಕ್ಸ್ ಮೀಡಿಯಾ ಪ್ರಕರಣ: ಪಿ. ಚಿದಂಬರಂಗೆ ಜಾಮೀನು

Update: 2019-12-04 05:32 GMT

ಹೊಸದಿಲ್ಲಿ, ಡಿ.4: ಐಎನ್ ಎಕ್ಸ್ ಮೀಡಿಯಾ  ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂಗೆ ಸುಪ್ರೀಂ ಕೋರ್ಟ್ ಬುಧವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿ ಭಾನುಮತಿ ನೇತೃತ್ವದ ತ್ರಿ ಸದಸ್ಯ ನ್ಯಾಯಪೀಠ ಚಿದಂಬರಂಗೆ ಜಾಮೀನು ನೀಡಿದೆ.

ಇಬ್ಬರು ಶ್ಯೂರಿಟಿ, 2 ಲಕ್ಷ ರೂ. ಠೇವಣಿ ಇಡಬೇಕು. ಅಧಿಕಾರಿಗಳಿಗೆ  ವಿಚಾರಣೆಗೆ ಸಹಕರಿಸಬೇಕು . ಪಾಸ್ ಪೋರ್ಟ್  ವಶಕ್ಕೆ ನೀಡಬೇಕು  ಎಂದು ಪಿ.ಚಿದಂಬರಂ ಅವರಿಗೆ ಆದೇಶ ನೀಡಿರುವ ಸುಪ್ರೀಂ ಕೋರ್ಟ್  ಸಾರ್ವಜನಿಕೆ ಹೇಳಿಕೆ  ಮತ್ತು ಸಂದರ್ಶನ ನೀಡದಂತೆ  ಸೂಚನೆ ನೀಡಿದೆ.

ಇದರೊಂದಿಗೆ ಚಿದಂಬರಂ ಅವರ 106 ದಿನಗಳ ಜೈಲುವಾಸ ಅಂತ್ಯಗೊಂಡಿದೆ . 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News