ವಿದ್ಯುತ್ ತಂತಿ ತಗಲಿ ಎರಡು ಎಕರೆ ಕಬ್ಬು ಬೆಳೆ ನಾಶ

Update: 2019-12-04 18:34 GMT

ಮಂಡ್ಯ, ಡಿ.4: ವಿದ್ಯುತ್ ತಂತಿ ತಗಲಿ ಸುಮಾರು ಎರಡು ಎಕರೆ ಕಬ್ಬು ಬೆಳೆ ನಷ್ಟವಾಗಿರುವ ಘಟನೆ ಕೆ.ಆರ್.ಪೇಟೆ ತಾಲೂಕಿನ ಗುಡ್ಡೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಪುಟ್ಟಸ್ವಾಮಿಗೌಡ ಹಾಗೂ ಗಿರೀಶ್ ಅವರಿಗೆ ಸೇರಿದ ಕಬ್ಬು ಬೆಂಕಿಗಾಹುತಿಯಾಗಿದೆ. ಕಬ್ಬು ಕಟಾವು ಮಾಡುತ್ತಿದ್ದ ವೇಳೆಯಲ್ಲೇ ಈ ಘಟನೆ ಸಂಭವಿಸಿದೆ.

ಗ್ರಾಮಸ್ಥರು ಮತ್ತು ಅಗ್ನಿಶಾಮಕದ ದಳದವರು ಬೆಂಕಿಯನ್ನು ನಂದಿಸಿ, ಪಕ್ಕದ ಬೆಳೆಗಳಿಗೆ ಹರಡದಂತೆ ತಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News