ವಾಹನ ಅಪಘಾತ: ಸಾಹಿತಿ ಚಂದ್ರಶೇಖರ ಆನೆಗುಂದಿಗೆ ಗಾಯ

Update: 2019-12-06 09:22 GMT

ಯಾದಗಿರಿ, ಡಿ.6: ಶಹಾಪುರ ತಾಲೂಕಿನ ಹತ್ತಿಗೂಡುರ ಗ್ರಾಮದಲ್ಲಿಂದು ನಡೆದ ವಾಹನ ಅಪಘಾತವೊಂದರಲ್ಲಿ ಶಹಾಪುರದ ಹಿರಿಯ ಸಾಹಿತಿ ಚಂದ್ರಶೇಖರ ಆನೆಗುಂದಿ ಗಾಯಗೊಂಡಿರುವುದು ವರದಿಯಾಗಿದೆ.

ಹತ್ತಿಗೂಡುರ ಗ್ರಾಮದ ಗೌರಮ್ಮ ಶಾಂತಿ ಗ್ರಾಮದ ಹತ್ತಿರ ಇವರು ಸಂಚರಿಸುತ್ತಿದ್ದ ಕಾರು ಹಾಗೂ ಜೀಪ್ ನಡುವೆ ಮುಖಾಮುಖಿ ಢಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಚಂದ್ರಶೇಖರ ಆನೆಗುಂದಿಯವರ ಕಾಲು ಮತ್ತು ತಲೆಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News