ಜನತಾ ನ್ಯಾಯಾಲಯ ಕಾಂಗ್ರೆಸ್-ಜೆಡಿಎಸ್ ನ್ನು ಅನರ್ಹ ಮಾಡಿದೆ : ಕಟೀಲ್
Update: 2019-12-09 06:47 GMT
ಬೆಂಗಳೂರು, ಡಿ.9: ಶಾಸಕರನ್ನು ಅನರ್ಹರನ್ನಾಗಿ ಮಾಡಿದ ಕಾಂಗ್ರೆಸ್ ಮತ್ತು ಜೆಡಿಎಸ್ ನ್ನು ಜನತಾ ನ್ಯಾಯಾಲಯ ಅನರ್ಹ ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅಭಿಪ್ರಾಯಪಟ್ಟಿದ್ದಾರೆ.
ಉಪ ಚುನಾವಣೆಯ ಫಲಿತಾಂಶದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇನ್ನು ಮೂರುವರೆ ವರ್ಷಗಳ ಕಾಲ ಬಿ.ಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯದ ಬಿಜೆಪಿ ಸರಕಾರ ಸುಭದ್ರವಾಗಿದೆ ಎಂದರು.
ನಾವು ಆಪರೇಶನ್ ಮಾಡುವುದಿಲ್ಲ. ನಮ್ಮದು ರಾಜಕೀಯ ಪಕ್ಷ. ಯಾರೂ ಬಂದರೂ ನಾವು ಸ್ವಾಗತಿಸುತ್ತೇವೆ. ಎಂದು ನುಡಿದರು.