ಸುವರ್ಣ ಕರ್ನಾಟಕದ ನಿರ್ಮಾಣ ಅಡೆತಡೆಯಿಲ್ಲದೆ ಸಾಗಲಿದೆ: ಭರ್ಜರಿ ಗೆಲುವಿನ ನಂತರ ರಾಜ್ಯ ಬಿಜೆಪಿ ಟ್ವೀಟ್
Update: 2019-12-09 07:01 GMT
ಬೆಂಗಳೂರು, ಡಿ.9 : ಉಪಚುನಾವಣೆಯಲ್ಲಿ ಬಿಜೆಪಿಗೆ ಸಂದ ಭರ್ಜರಿ ಜಯ ಮತದಾರರು ಪಕ್ಷದ ಅಭಿವೃದ್ಧಿ ಮಂತ್ರ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಇಟ್ಟಿರುವ ನಂಬಿಕೆಗೆ ಸಾಕ್ಷಿ ಎಂದು ರಾಜ್ಯ ಬಿಜೆಪಿ ಟ್ವೀಟ್ ಮಾಡಿದೆ.
ಈ ಗೆಲುವು ಸ್ಥಿರ ಸರ್ಕಾರ ನೀಡುವ ನಮ್ಮ ಸಂಕಲ್ಪಕ್ಕೆ ಜನತೆ ನೀಡಿರುವ ಆಶೀರ್ವಾದ. ಸುವರ್ಣ ಕರ್ನಾಟಕದ ನಿರ್ಮಾಣ ಅಡೆತಡೆಯಿಲ್ಲದೆ ಸಾಗುವುದು ಖಚಿತ ಎಂದು ಟ್ವೀಟ್ ನಲ್ಲಿ ಹೇಳಿದೆ.