ಬಿಜೆಪಿ ಗೆಲುವಿನ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕಟೀಲ್ ಪ್ರತಿಕ್ರಿಯೆ

Update: 2019-12-09 14:26 GMT

ಬೆಂಗಳೂರು, ಡಿ.9: ಸ್ಥಿರ ಹಾಗೂ ಸದೃಢ ಸರಕಾರಕ್ಕಾಗಿ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಿದ ಎಲ್ಲ ಮತದಾರರಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಧನ್ಯವಾದಗಳು ಸಲ್ಲಿಸಿದ್ದಾರೆ.

ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಸರಕಾರಗಳ ಸಾಧನೆಗಳನ್ನು ಜನರು ಬೆಂಬಲಿಸಿರುವುದು ಈ ಚುನಾವಣೆಯ ಮೂಲಕ ಮತ್ತೊಮ್ಮೆ ಸಾಬೀತಾಗಿದೆ. ಮಹತ್ವದ ಕಾಲಘಟ್ಟದಲ್ಲಿ ಮತದಾರರು ಬಿಜಿಪಿ ಸರಕಾರವನ್ನು ಬಲಪಡಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿರುವುದರಿಂದ ರಾಜ್ಯದ ಪ್ರಗತಿಗೆ ಸಹಕಾರಿಯಾಗಲಿದೆ.

ಕೇಂದ್ರ ಸರಕಾರದ ಹಲವು ಯೋಜನೆಗಳನ್ನು ರಾಜ್ಯದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳ್ಳಲು, ಅನುದಾನ ತರಲು ಸಹಕಾರಿಯಾಗಲಿದೆ. ಸಿಲಿಕಾನ್ ಸಿಟಿಯಲ್ಲಿ ಮೂಲ ಸೌಕರ್ಯ ಹೆಚ್ಚಿಸಿ ಭವಿಷ್ಯದ ನಗರವನ್ನಾಗಿ ಮಾಡಲಾಗುವುದು. ಮೂರು ತಿಂಗಳಿನಿಂದ ರಾಜ್ಯದಲಿ ಬಿಜೆಪಿ ಸರಕಾರ ತನ್ನ ಬದ್ಧತೆ ಈಡೇರಿಸುವತ್ತ ಸಾಗಿದೆ. ಇದೀಗ ಮತ್ತಷ್ಟು ವೇಗ ಸಿಗಲಿದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News