ಚತ್ತೀಸ್‌ಗಢ: ಹೃದಯಾಘಾತದಿಂದ ಮಾವೋವಾದಿ ರಾಮಣ್ಣ ಸಾವು

Update: 2019-12-10 19:04 GMT
Photo: news18.com

ರಾಯಪುರ, ಡಿ. 10: ದೇಶಕ್ಕೆ ಬೇಕಾಗಿದ್ದ ಮಾವೋವಾದಿ ರಾವುಲ ಶ್ರೀನಿವಾಸ್ ಆಲಿಯಾಸ್ ರಾಮಣ್ಣ (55) ಚತ್ತೀಸ್‌ಗಢ ಅರಣ್ಯದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.

ರಾಮಣ್ಣ ದಂಡಕಾರಣ್ಯ ವಿಶೇಷ ವಲಯ ಸಮಿತಿಯ ಕಾರ್ಯದರ್ಶಿ ಹಾಗೂ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ)ದ ಕೇಂದ್ರ ಸಮಿತಿಯ ಸದಸ್ಯನಾಗಿದ್ದ.

  ಬಸ್ತಾರ್, ತಾಡ್‌ಮೆಟ್ಲಾ, ಝಿರಾಮ್, ಬುರ್ಕಾಪಾಲ್ ಹಾಗೂ ಇತರೆಡೆ ಭದ್ರತಾ ಪಡೆ ವಿರುದ್ಧ ನಡೆಸಿದ ದಾಳಿಯ ಪ್ರಮುಖ ರೂವಾರಿಯಾಗಿದ್ದ.

ರಾಮಣ್ಣನ ಸಾವು ದೃಢಪಟ್ಟಿದೆ. ರಾಮಣ್ಣ ಸಾವನ್ನು ಮಾವೋವಾದಿಗಳು ಇದುವರೆಗೆ ನಿರಾಕರಿಸಿಲ್ಲ ಎಂದು ಬಸ್ತಾರ್‌ನ ಐಜಿಪಿ ಪಿ. ಸುಂದರ್ ರಾಜ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News