ರಾಜ್ಯಮಟ್ಟದ ಕವಿಗೋಷ್ಟಿಗೆ ಲುಕ್ಮಾನ್ ಅಡ್ಯಾರ್, ಸಫ್ವಾನ್ ಅಳಕೆ ಆಯ್ಕೆ

Update: 2019-12-12 07:17 GMT

ಮಂಗಳೂರು, ಡಿ.12: ಕರುನಾಡು ಸಾಹಿತ್ಯ ಪರಿಷತ್ತು ಹಾಗೂ ವಿಜಯ ಕಾಲೇಜು ಬೆಂಗಳೂರು ಇದರ ಸಹಭಾಗಿತ್ವದಲ್ಲಿ ಡಿ.15 ರಂದು ಆಯೋಜಿಸುವ ರಾಜ್ಯಮಟ್ಟದ ಕವಿಗೋಷ್ಟಿಗೆ ದ.ಕ ಜಿಲ್ಲೆಯ ಎಸ್.ಡಿ.ಎಂ ಕಾನೂನು ಕಾಲೇಜ್ ವಿದ್ಯಾರ್ಥಿ, ಯುವ ಬರಹಗಾರ ಲುಕ್ಮಾನ್ ಅಡ್ಯಾರ್ ಮತ್ತು ಜೆ.ಎಸ್.ಎ. ಕಾಸರಗೋಡು ಶರೀಅತ್ ವಿದ್ಯಾರ್ಥಿ ಸಫ್ವಾನ್ ಅಳಕೆ ಆಯ್ಕೆಯಾಗಿದ್ದಾರೆ.

ಈ ಇಬ್ಬರು ಕವಿಗಳನ್ನೊಳಗೊಂಡ ಸುಮಾರು ಇಪ್ಪತ್ತರಷ್ಟು ಕವಿಗಳು ಕಾರ್ಯಕ್ರಮದಲ್ಲಿ ಕವನ ವಾಚನ ಮಾಡಲಿದ್ದಾರೆ. ಲುಕ್ಮಾನ್ ಅಡ್ಯಾರ್ ಪ್ರಸ್ತುತ ಮಂಗಳೂರಿನ ಪ್ರತಿಷ್ಟಿತ ಕಾನೂನು ಕಾಲೇಜಿನ ಮೂರನೇ ವರ್ಷದ ವಿದ್ಯಾರ್ಥಿ ಮತ್ತು ಡಿ.27ಕ್ಕೆ ನಡೆಯುವ ಜಾಮಿಅ ಸಅದಿಯಾ ಅರೇಬಿಯಾದ ಸ್ವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಸಅದಿ ಬಿರುದನ್ನು ಪಡೆಯಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News