ಪತ್ನಿಯ ಕಿರುಕುಳ ಆರೋಪ: ಟೆಕ್ಕಿ ಆತ್ಮಹತ್ಯೆ

Update: 2019-12-14 14:09 GMT

ಬೆಂಗಳೂರು, ಡಿ.14: ಪತ್ನಿಯ ಕಿರುಕುಳದಿಂದ ಮನನೊಂದು ಟೆಕ್ಕಿ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳ್ಳಂದೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೃತ ಟೆಕ್ಕಿಯನ್ನು ಆಂಧ್ರಪ್ರದೇಶ ಮೂಲದ ಶ್ರೀನಾಥ್(39) ಎಂದು ಗುರುತಿಸಲಾಗಿದೆ. 2009ರಲ್ಲಿ ಟೆಕ್ಕಿ ಶ್ರೀನಾಥ್ ರೇಖಾ ಎಂಬುವರನ್ನು ಮದುವೆಯಾಗಿದ್ದರು. ದಂಪತಿಗಳಿಬ್ಬರೂ ಖಾಸಗಿ ಕಂಪನಿಯಲ್ಲಿ ಸಾಫ್ಟ್‌ವೇರ್ ಉದ್ಯೋಗಿಗಳಾಗಿದ್ದರು. ತಂದೆ-ತಾಯಿಯ ಆಸ್ತಿಯನ್ನು ಪಡೆಯುವಂತೆ ಪತ್ನಿ ರೇಖಾ ತನ್ನ ಪತಿಯ ಮೇಲೆ ಒತ್ತಡ ಹಾಕುತ್ತಿದ್ದಳು. ಆಸ್ತಿ ಪಡೆಯದಿದ್ದರೆ ವಿಚ್ಛೇದನ ನೀಡುವ ಬೆದರಿಕೆ ಒಡ್ಡಿದ್ದಳು. ಇದರಿಂದ ಮನನೊಂದ ಪತಿ ಶ್ರೀನಾಥ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಈ ಕುರಿತು ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ರೇಖಾ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News