ಸಚಿನ್ ತೆಂಡುಲ್ಕರ್ ಗೆ ನೀಡಲಾಗಿದ್ದ x ಭದ್ರತೆ ವಾಪಸ್ , ಆದಿತ್ಯ ಠಾಕ್ರೆ ಗೆ z ಭದ್ರತೆ

Update: 2019-12-25 09:01 GMT

ಮುಂಬೈ, ಡಿ.25: ಮಾಜಿ ಕ್ರಿಕೆಟಿಗ  ಸಚಿನ್ ತೆಂಡುಲ್ಕರ್ ಅವರಿಗೆ ನೀಡಲಾಗಿದ್ದ x  ದರ್ಜೆ ಭದ್ರತೆಯನ್ನು  ಹಿಂತೆಗೆದುಕೊಳ್ಳಲಾಗಿದೆ, ಆದಾಗ್ಯೂ  ಅವರು ಬೆಂಗಾವಲು ಹೊಂದಿರುತ್ತಾರೆ.

ಇದೇ ವೇಳೆ ಶಿವಸೇನೆ ಮುಖಂಡ ಆದಿತ್ಯ ಠಾಕ್ರೆ ಅವರ ಭದ್ರತಾ ವ್ಯಾಪ್ತಿಯನ್ನು Y + ನಿಂದ Z ಗೆ ಹೆಚ್ಚಿಸಲಾಗಿದೆ.

ಬೆಂಗಾವಲು ಹೊಂದಿರುವ y  ವಿಭಾಗದಲ್ಲಿ ಬಿಜೆಪಿ ನಾಯಕ ಏಕನಾಥ್ ಖಡ್ಸೆ ಅವರ ಭದ್ರತಾ ವ್ಯಾಪ್ತಿಯನ್ನು ಕಡಿಮೆ ಮಾಡಲಾಗಿದೆ. ಅವರು ಇನ್ನು ಮುಂದೆ ಬೆಂಗಾವಲು ಹೊಂದಿರುವುದಿಲ್ಲ.

ಮಾಜಿ ಬಿಜೆಪಿ ಮುಖಂಡ ಮತ್ತು ಯುಪಿ ಗವರ್ನರ್ ರಾಮ್ ನಾಯಕ್ ಅವರ ಭದ್ರತಾ ವ್ಯಾಪ್ತಿಯನ್ನು z + ನಿಂದ x ಗೆ  ಮತ್ತು  ವಿಶೇಷ ಸಾರ್ವಜನಿಕ ಅಭಿಯೋಜಕ ಉಜ್ವಾಲ್ ನಿಕಮ್ ಅವರ ಭದ್ರತಾ ವ್ಯಾಪ್ತಿಯನ್ನು z+ ನಿಂದ y ದರ್ಜೆಗೆ   ಇಳಿಸಲಾಗಿದೆ.

ಮಹಾರಾಷ್ಟ್ರದಲ್ಲಿ 97  ಮಂದಿಗೆ  ಭದ್ರತಾ ರಕ್ಷಣೆಯನ್ನು ಒದಗಿಸಲಾಗಿದ್ದು, ಈ ಪೈಕಿ 29 ಮಂದಿಗೆ ಭದ್ರತಾ ವ್ಯಾಪ್ತಿಯನ್ನು ಕಡಿಮೆ ಮಾಡಲಾಗಿದೆ ಅಥವಾ ಹೆಚ್ಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News