ಕ್ಯಾಚ್ ಹಿಡಿಯಲು ಹೋಗಿ ಪರಸ್ಪರ ಢಿಕ್ಕಿ: ಪ್ರಜ್ಞೆ ಕಳೆದುಕೊಂಡ ಇಬ್ಬರು ಆಟಗಾರರು

Update: 2019-12-25 13:15 GMT

ಕೋಲಾರ, ಡಿ.25: ಲೋಕಲ್ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ವೇಳೆ ಇಬ್ಬರು ಆಟಗಾರರು ಕ್ಯಾಚ್ ಹಿಡಿಯಲು ಹೋಗಿ ಪರಸ್ಪರ ಢಿಕ್ಕಿ ಹೊಡೆದುಕೊಂಡ ಪರಿಣಾಮ ಪ್ರಜ್ಞೆ ಕಳೆದುಕೊಂಡ ಘಟನೆ ಇಂದು ಮದ್ಯಾಹ್ನ ನಡೆದಿದೆ.

ಕೋಲಾರ ಶ್ರೀನಿವಾಸಪುರದ ಸೋಮಯಾಜಲಹಳ್ಳಿಯಲ್ಲಿ ಕ್ರಿಕೆಟ್ ಟೂರ್ನಮೆಂಟ್ ನಡೆಯುತ್ತಿದ್ದು, ರೈಸಿಂಗ್ ಸ್ಟಾರ್ಸ್ & SAS ಕ್ರಿಕೆಟರ್ಸ್ ನಡುವೆ ಪಂದ್ಯ ನಡೆಯುತ್ತಿತ್ತು. ಈ ವೇಳೆ ಬ್ಯಾಟ್ಸ್ ಮ್ಯಾನ್ ಬಾರಿಸಿದ ಚೆಂಡನ್ನು ಕ್ಯಾಚ್ ಹಿಡಿಯಲು ಹೋಗಿ ಇಬ್ಬರು ಆಟಗಾರರು ಪರಸ್ಪರ ಢಿಕ್ಕಿ ಹೊಡೆದುಕೊಂಡಿದ್ದಾರೆ. ಬಾನು ಹಾಗೂ ಶ್ರೀನಿವಾಸ ಢಿಕ್ಕಿ ಹೊಡೆದುಕೊಂಡ ಆಟಗಾರರರಾಗಿದ್ದು, ಘಟನೆಯಿಂದ ಇಬ್ಬರೂ ಪ್ರಜ್ಞೆ ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಇಬ್ಬರು ಆಟಗಾರರನ್ನೂ ಇತರರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಯ ವಿಡಿಯೋ ವೈರಲ್ ಆಗಿದೆ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News