ಎತ್ತಿನ ಗಾಡಿಗೆ ಲಾರಿ ಢಿಕ್ಕಿ: ಮೂವರು ಮೃತ್ಯು

Update: 2019-12-29 12:00 GMT

ಕಲಬುರ್ಗಿ, ಡಿ.29: ಲಾರಿಯೊಂದು ಎತ್ತಿನ ಗಾಡಿಗೆ ಢಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲಿಯೇ ಮೃತಪಟ್ಟಿರುವ  ಘಟನೆ ಇಲ್ಲಿನ ಕಮಲಾಪೂರ ತಾಲೂಕಿನ ಕಟ್ಟೋಳಿ ಕ್ರಾಸ್ ಬಳಿ ನಡೆದಿದೆ ಎಂದು ವರದಿಯಾಗಿದೆ.

ಚಿತ್ತಾಪೂರ ತಾಲೂಕಿನ ಅಣಕಲ್ ಕಿಂಡಿ ತಾಂಡಾ ನಿವಾಸಿಗಳಾದ ಜಗದೇವಿ ರಾಠೋಡ್(32), ಸವಿತಾ ಚವ್ಹಾಣ್(33) ಹಾಗೂ ದಶರಥ ಚವ್ಹಾಣ್(40) ಮೃತಪಟ್ಟವರು.

ಹುಮನಾಬಾದ ಕಡೆಯಿಂದ ಕಲಬುರಗಿಯತ್ತ ಹೊರಟಿದ್ದ ಲಾರಿಯು ರಸ್ತೆ ಪಕ್ಕದಲ್ಲಿ ಹೋಗುತ್ತಿದ್ದ ಎತ್ತಿನ ಗಾಡಿಗೆ ಢಿಕ್ಕಿ ಹೊಡೆದಿದೆ.ಇದರ ಪರಿಣಾಮ ಮೂವರು ಸ್ಥಳದಲ್ಲಿಯೇ ಮೃತಪಟ್ಟರೆ, ನಾಲ್ವರು ಗಂಭೀರವಾಗಿ ಗಾಯಗೊಂಡು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಘಟನೆ ಸಂಬಂಧ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಮಲಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News