ವಕ್ಫ್ ಬೋರ್ಡ್‌ಗೆ ಮೌಲಾನ ಶಾಫಿ ಸಅದಿ ನಾಮ ನಿರ್ದೇಶನ

Update: 2020-01-04 17:41 GMT

ಬೆಂಗಳೂರು, ಜ.4: ಕರ್ನಾಟಕ ಮುಸ್ಲಿಮ್ ಜಮಾಅತ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮೌಲಾನ ಎನ್.ಕೆ.ಮುಹಮ್ಮದ್ ಶಾಫಿ ಸಅದಿಯನ್ನು ಸುನ್ನಿ ವಿದ್ವಾಂಸ ವಿಭಾಗದಡಿಯಲ್ಲಿ ರಾಜ್ಯ ವಕ್ಫ್ ಬೋರ್ಡ್‌ಗೆ ನಾಮ ನಿರ್ದೇಶಿತ ಸದಸ್ಯರನ್ನಾಗಿ ನೇಮಕ ಮಾಡಿ ರಾಜ್ಯ ಸರಕಾರ ಜ.2ರಂದು ಆದೇಶ ಹೊರಡಿಸಿದೆ.

ಶಿಯಾ ವಿದ್ವಾಂಸ ವಿಭಾಗದಡಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಅಲಿಪುರದ ಮೌಲಾನ ಮೀರ್ ಅಝರ್ ಹುಸೈನಿ, ರಾಜ್ಯ ಸರಕಾರದ ಅಧಿಕಾರಿ ವಿಭಾಗದಡಿಯಲ್ಲಿ ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯದರ್ಶಿ ಖಾಝಿ ನಫಿಸಾ ಹಾಗೂ ಸಮಾಜ ಸೇವೆ ವಿಭಾಗದಡಿಯಲ್ಲಿ ಶಿವಮೊಗ್ಗದ ಜಿ.ಯಾಖೂಬ್ ಅವರನ್ನು ನಾಮ ನಿರ್ದೇಶನ ಮಾಡಲಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಉಪ ಕಾರ್ಯದರ್ಶಿ ವೈ.ಎಸ್.ದಳವಾಯಿ ಅಧಿಸೂಚನೆ ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News