ಸಾಲಭಾಧೆ: ರೈತ ಆತ್ಮಹತ್ಯೆ

Update: 2020-01-05 18:35 GMT

ಮಂಡ್ಯ: ಸಾಲಭಾದೆಯಿಂದ ರೈತ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ತಾಲ್ಲೂಕಿನ ಚನ್ನಪ್ಪನದೊಡ್ಡಿಯಲ್ಲಿ ನಡೆದಿದೆ.
55 ವರ್ಷದ ಅರಕೇಶ್ ಎಂಬುವರೆ ಆತ್ಮಹತ್ಯೆ ರೈತ. ಸೊಸೈಟಿ ಹಾಗೂ ಜಮೀನನ್ನು ಖಾಸಗಿಯವರಲ್ಲಿ ಒತ್ತೆ ಇಟ್ಟು ನಾಲ್ಕು ಲಕ್ಷದವರೆಗೂ ಸಾಲ ಮಾಡಿಕೊಂಡಿದ್ದು ಈ ಕೃತ್ಯಕ್ಕೆ ಕಾರಣವೆನ್ನಲಾಗಿದೆ. ಜಮೀನಿನಲ್ಲಿ ಬೆಳೆದಿದ್ದ ಕಬ್ಬು ಕಟಾವು ಮಾಡಿ ಕಾರ್ಖಾನೆಗೆ ಸಾಗಿಸಲು ಆಗದೆ.ಸಾಲ ತೀರಿಸಲು ಆಗದೆ ಒತ್ತಡದಲ್ಲಿ ಮನೆಯಲ್ಲಿ ಯಾರು ಇಲ್ಲದ ಸಂಧರ್ಭದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಂಡ್ಯ ಗ್ರಾಮಾಂತರ ಠಾಣೆ ಪೋಲಿಸರು ಮುಂದಿನ ಕ್ರಮ ಜರುಗಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News