ಚಾಮರಾಜನಗರ: ಸಿಎಎ, ಎನ್‌ಆರ್‌ಸಿ ವಿರುದ್ಧ ಮಹಿಳೆಯರ ಬೃಹತ್ ಪ್ರತಿಭಟನೆ

Update: 2020-01-06 18:29 GMT

ಚಾಮರಾಜನಗರ: ಸಿಎಎ, ಎನ್‌ಆರ್‌ಸಿ ಹಾಗೂ ಎನ್.ಪಿ.ಆರ್ ವಿರುದ್ಧ ಇಂದು ವುಮೆನ್ಸ್ ಇಂಡಿಯ ಮೂಮೆಂಟ್ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು.

ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಸಾವಿರಾರು ಮಹಿಳೆಯರು ಲಾರಿ ಸ್ಟ್ಯಾಂಡ್ ಗೆ ಆಗಮಿಸಿ ಪ್ರತಿಭಟನೆ ನಡೆಸಿದರು.

'ಭಾರತದ ಸಂವಿಧಾನ ಭಾವೈಕ್ಯ ತೆ ಸಾರುತ್ತಿದೆ. ಈ ವಿಷಯ ಇಡೀ ಜಗತ್ತಿಗೆ ಗೊತ್ತಿರುವ ವಿಚಾರ. ಯಾವುದೇ ಕಾರಣಕ್ಕೂ ನಾವು ಪೌರತ್ವ ಕರಾಳ ಕಾಯಿದೆ ಒಪ್ಪುವುದಿಲ್ಲ. ದೇಶದ ಸಾಂಸ್ಕೃತಿಕ ಇತಿಹಾಸ ಕೆಡಕುವ ಹುನ್ನಾರ ಕೇಂದ್ರ ಬಿಜೆಪಿ ಸರ್ಕಾರ ಮಾಡುತ್ತಿದೆ. ಎಲ್ಲಾ ಜನಾಂಗಗಳ ನಡುವೆ ಬಿರುಕು ಉಂಟು ಮಾಡುವ ನಿಟ್ಟಿನಲ್ಲಿ ಪೌರತ್ವ ಕರಾಳ ಕಾಯಿದೆ ತಂದು ದೇಶ ವಿಭಜನೆ ಮಾಡುವ ಪ್ರಯತ್ನ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಕಿಡಿಕಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News