ಉತ್ತರ ಪ್ರದೇಶದಲ್ಲಿ ಕಣ್ಣನ್ ಗೋಪಿನಾಥನ್ ಪೊಲೀಸ್ ವಶಕ್ಕೆ

Update: 2020-01-19 10:35 GMT
Photo: facebook.com/kannan.gopinathan

ಪ್ರಯಾಗ್ ರಾಜ್: ಮಾಜಿ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್ ಅವರನ್ನು ಉತ್ತರ ಪ್ರದೇಶದ ಪ್ರಯಾಗ್ ರಾಜ್ ನ ವಿಮಾನ ನಿಲ್ದಾಣದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.

ಆಲ್ ಇಂಡಿಯಾ ಪೀಪಲ್ಸ್ ಫಾರಂ ಹಮ್ಮಿಕೊಂಡಿದ್ದ 'ಪೌರತ್ವ ಉಳಿಸಿ, ಸಂವಿಧಾನ ಉಳಿಸಿ, ಪ್ರಜಾಪ್ರಭುತ್ವ ಉಳಿಸಿ' ಎನ್ನುವ ಕಾರ್ಯಕ್ರಮದಲ್ಲಿ ಮಾತನಾಡಲು ದಿಲ್ಲಿಯಿಂದ ಗೋಪಿನಾಥನ್ ಪ್ರಯಾಗ್ ರಾಜ್ ಗೆ ಆಗಮಿಸಿದ್ದರು.

"ನಾನು ವಿಮಾನದಿಂದ ಇಳಿದು ಹೊರಗಡೆ ತೆರಳುತ್ತಿದ್ದಾಗ ಪೊಲೀಸರು ನನ್ನ ಬಳಿ ಬಂದು ನನ್ನ ಗುರುತನ್ನು ಕೇಳಿದರು. ನಾನು ಹೆಸರು ಹೇಳಿದಾಗ ನನ್ನನ್ನು ಸುತ್ತುವರಿದು ವಿಐಪಿ  ಲಾಂಜ್ ಗೆ ಕರೆದೊಯ್ದರು ನಂತರ ಭದ್ರತಾ ಕೋಣೆಯೊಂದಕ್ಕೆ ಕರೆದೊಯ್ದರು" ಎಂದು ಕಣ್ಣನ್ ತಿಳಿಸಿದ್ದಾರೆ.

ಪೊಲೀಸರು ಕಣ್ಣನ್ ಗೋಪಿನಾಥನ್ ರನ್ನು ದಿಲ್ಲಿ ವಿಮಾನದಲ್ಲಿ ವಾಪಸ್ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News