ಡಿಸಿಎಂ ಸಹಿತ ಸಚಿವ ಸ್ಥಾನ ತೊರೆಯಲು ಸಿದ್ಧ: ಗೋವಿಂದ ಕಾರಜೋಳ

Update: 2020-01-27 10:10 GMT

ವಿಜಯಪುರ, ಜ.27: “ನಾನು ರಾಜ್ಯಾದ್ಯಂತ ಓಡಾಡುತ್ತಿದ್ದೇನೆ, ಸಚಿವ ಸಂಪುಟ ವಿಸ್ತರಣೆ ಬಗ್ಗೆ ನನಗೆ ಮಾಹಿತಿ ಇಲ್ಲ. ಇನ್ನೂ ಸಚಿವ ಸಂಪುಟ ವಿಸ್ತರಣೆ ಕುರಿತು ನಾನು ರಾಜೀನಾಮೆ ನೀಡಬೇಕು ಅಂತ ಪಕ್ಷ ಬಯಸಿದರೆ ಸಂತೋಷದಿಂದಲೇ ರಾಜೀನಾಮೆ ನೀಡುವೆ” ಎಂದು ಹೇಳಿದ್ದಾರೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ.

ವಿಜಯಪುರದಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿ ಹಾಗೂ ಪಕ್ಷದಲ್ಲಿ ಯಾವುದೇ ಗೊಂದಲಗಳಿಲ್ಲ. ತಾನು ನಾಡಿದ್ದು ಬೆಂಗಳೂರಿಗೆ ಹೋದ ಮೇಲೆ ಮುಖ್ಯಮಂತ್ರಿಯನ್ನು ಭೇಟಿ ಆಗುತ್ತೇನೆ. ಆಗ ಏನೇನು ಬೆಳವಣಿಗೆ ಆಗುತ್ತೋ ಗೊತ್ತಾಗುತ್ತದೆ ಎಂದರು.

 ಇನ್ನೂ ಕೆಲವ ಸಚವರ ಸ್ಥಾನಮಾನ ತ್ಯಾಗ ವಿಚಾರವಾಗಿ ಪ್ರತಿಕ್ರಿಯಿಸಿದ ಕಾರಜೋಳ, ಡಿಸಿಎಂ ಸ್ಥಾನ, ಸಚಿವ ಸ್ಥಾನಗಳನ್ನು ತ್ಯಾಗ ಮಾಡುವಂತೆ ಪಕ್ಷ ಸೂಚಿಸಿದರೆ ಇವತ್ತೇ ತ್ಯಾಗ ಮಾಡುತ್ತೇನೆ,  ಪಕ್ಷ ಏನು ನಿರ್ಣಯ ತೆಗೆದುಕೊಳ್ಳುತ್ತದೆಯೋ ಅದಕ್ಕೆ ಬದ್ಧವಾಗಿದ್ದೇನೆ‌,  ತಾನೊಬ್ಬ ಪಕ್ಷದ ಶಿಸ್ತಿನಿ ಸಿಪಾಯಿ ಆಗಿ ಕೆಲಸ ಮಾಡುತ್ತೇನೆ ಎಂದರು.

ವಿಜಯಪುರ ಜಿಲ್ಲೆಗೆ ಸ್ಥಾನಮಾನ ಸಿಗಬಹುದು ಎಂಬ ನಿರೀಕ್ಷೆ ಇದೆ, ಅದನ್ನು ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ, ಖಂಡಿತವಾಗಿ ಸಿಗಬೇಕು ಎಂಬುದು ನನ್ನ ಅಪೇಕ್ಷೆ ಆಗಿದೆ. ಅಖಂಡ ಜಿಲ್ಲೆ ಇದ್ದಾಗ ತಾನು ವಿಜಯಪುರದವನೇ ಆಗಿದ್ದೇನೆ. ಜಿಲ್ಲೆ ವಿಂಗಡಣೆ ಆದ ಬಳಿಕ ಬಾಗಲಕೋಟೆಗೆ ಹೋಗಿದ್ದೇನೆ. ಹಾಗಾಗಿ ವಿಜಯಪುರ- ಬಾಗಲಕೋಟೆ ಜಿಲ್ಲೆಗಳಿಗೆ ಸಚಿವ ಸ್ಥಾನಗಳು ಸಿಗಲಿ ಎಂಬುದು ತನ್ನ ಆಸೆಯೂ ಆಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News