ಸಿಎಎ ವಿರುದ್ಧದ ಮಾನವ ಸರಪಳಿಯಲ್ಲಿ ಭಾಗವಹಿಸಿದ ಸದಸ್ಯನನ್ನು ಅಮಾನತುಗೊಳಿಸಿದ ಮುಸ್ಲಿಂ ಲೀಗ್

Update: 2020-01-29 17:23 GMT

ಕೋಯಿಕ್ಕೋಡ್: ಕೇರಳ ಸರಕಾರ ಸಿಎಎ ವಿರುದ್ಧ ಹಮ್ಮಿಕೊಂಡಿದ್ದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕಾಗಿ ಬೇಪೂರ್ ಕ್ಷೇತ್ರದ ಸ್ಥಳೀಯ ನಾಯಕ ಕೆ.ಎಂ. ಬಶೀರ್ ಎಂಬವರನ್ನು ಮುಸ್ಲಿಮ್ ಲೀಗ್ ಅಮಾನತುಗೊಳಿಸಿದೆ.

ಪಕ್ಷದೊಂದಿಗೆ ಚರ್ಚಿಸದೆ ಕಾರ್ಯಕರ್ತರು ಯಾವುದೇ ಪ್ರತಿಭಟನೆಯಲ್ಲಿ ಭಾಗವಹಿಸಬಾರದು ಎಂದು ಮುಸ್ಲಿಂ ಲೀಗ್ ನಿರ್ಧರಿಸಿತ್ತು. ಈ ನಿರ್ಧಾರವನ್ನು ಉಲ್ಲಂಘಿಸಿ ಬಶೀರ್ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಎಂದು ಮುಸ್ಲಿಂ ಲೀಗ್ ಹೇಳಿದೆ.

620 ಕಿ.ಮೀ. ಉದ್ದದ ಮಾನವ ಸರಪಳಿಯಲ್ಲಿ ಸುಮಾರು 70 ಲಕ್ಷ ಜನರು ಭಾಗವಹಿಸಿದ್ದರು ಎಂದು ಎಲ್ ಡಿಎಫ್ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News