ಕೋಲಾರ: ಸಿಎಎ ವಿರುದ್ಧ ಮಾನವ ಸರಪಳಿ ರಚಿಸಿ ಪ್ರತಿಭಟನೆ

Update: 2020-01-30 09:01 GMT

ಕೋಲಾರ, ಜ.30: ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ವಿರೋಧಿಸಿ ಗಾಂಧಿ ಹುತಾತ್ಮ ದಿನಾಚರಣೆಯ ದಿನವಾದ ಗುರುವಾರ ವಿವಿಧ ಜನಪರ ಸಂಘಟನೆಗಳಿಂದ ಮಹಾತ್ಮ ಗಾಂಧಿ ವನದಿಂದ ಮಾನವ ಸರಪಳಿಯನ್ನು ನಿರ್ಮಿಸಿ ಪ್ರತಿಭಟನೆ ನಡೆಸಲಾಯಿತು.

ಸಾವಿರಾರು ಸಂಖ್ಯೆಯಲ್ಲಿ ಯುವಕರು, ವಿದ್ಯಾರ್ಥಿಗಳು, ಮಹಿಳೆಯರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮಾನವ ಸರಪಳಿಯಲ್ಲಿ ಭಾಗವಹಿಸಿದ್ದರು.

ಬಂಡಾಯ ಸಾಹಿತಿ ಲಕ್ಷ್ಮೀಪತಿ ಕೋಲಾರ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಚಾಲನೆ ನೀಡಿದರು. ಇದೇ ವೇಳೆ ಮಾತನಾಡಿದ ಅವರು, ಶಾಂತಿ ಮತ್ತು ಅಹಿಂಸೆ ಪ್ರತಿಪಾದಕ ಮಹಾತ್ಮ ಗಾಂಧೀಜಿಯವರ ಹುತಾತ್ಮ ದಿನವಾದ ಜ.30ರಂದು ಸಂವಿಧಾನದ ಮೂಲ ಆಶಯದ ವಿರುದ್ಧ ನಿಲುವಿನ ಕೇಂದ್ರದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಮಾನವ ಸರಪಳಿಯನ್ನು ನಿರ್ಮಿಸಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.

ಪ್ರತಿಭಟನೆಯಲ್ಲಿ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ವಿ.ಗೀತಾ, ಹಿರಿಯ ದಲಿತ ಮುಖಂಡ ಎಚ್.ಎಂ.ರಾಮಚಂದ್ರ, ಸಿಪಿಎಂ ಮುಖಂಡ ಗಾಂಧಿ ನಗರ ನಾರಾಯಣಸ್ವಾಮಿ, ಎಸ್.ಎಫ್.ಐ. ರಾಜ್ಯ ಉಪಾಧ್ಯಕ್ಷ ವಾಸುದೇವ ರೆಡ್ಡಿ, ಭೀಮಸೇನೆ ರಾಜ್ಯಾಧ್ಯಕ್ಷ ಪಂಡಿತ್ ಮುನಿವೆಂಕಟಪ್ಪ, ಜನಾಧಿಕಾರ ಸಂಘಟನೆ ಜಿಲ್ಲಾ ಮುಖಂಡೆ ಮಂಜುಳಾ ಆರ್., ಮಾನವ ಹಕ್ಕುಗಳ ಹೋರಾಟಗಾರ ಸಿ.ವಿ.ನಾಗರಾಜ್, ನಗರಸಭಾ ಮಾಜಿ ಸದಸ್ಯರಾದ ಅಬ್ದುಲ್ ಖಯ್ಯೂಂ, ಸಲಾವುದ್ದೀನ್ ಬಾಬು, ಕಾರ್ಮಿಕ ಮುಖಂಡ ಪಿ.ಸಿ.ಶ್ರೀನಿವಾಸನ್, ವಿಜಯಕೃಷ್ಣ, ರೈತ ಮುಖಂಡ ಅಬ್ಬಣಿ ಶಿವಪ್ಪ, ನಳಿನಿ ಗೌಡ, ಟಿ.ಎಂ.ವೆಂಕಟೇಶ್, ಡಿವೈಎಫ್‌ಐ ತಂಗರಾಜ್, ಜೆಎಂಎಸ್ ವಿಜಯಲಕ್ಷ್ಮೀ, ಕೊಂಡರಾಜನಹಳ್ಳಿ ಮಂಜುಳಾ, ಟಿಪ್ಪು ಸೆಕ್ಯೂಲರ್ ಸೇನೆಯ ಆಸಿಫ್ ಪಾಷಾ, ತಬರೇಸ್ ಮುಂತಾದವರು ಭಾಗವಹಿಸಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News