ಕುನಾಲ್ ಕಾಮ್ರಾ ಮೇಲಿನ ನಿಷೇಧ ಸರಿಯಲ್ಲ: ಇಂಡಿಗೋ ವಿಮಾನದ ಪೈಲಟ್

Update: 2020-01-30 15:02 GMT

ಹೊಸದಿಲ್ಲಿ: ಕುನಾಲ್ ಕಾಮ್ರಾ ವಿರುದ್ಧ ನಿಷೇಧ ಹೇರುವ ಮೊದಲು ತನನ್ನು ಏಕೆ ಸಂಪರ್ಕಿಸಿಲ್ಲ ಎಂದು ಕುನಾಲ್ ಕಾಮ್ರಾ ಮತ್ತು ಅರ್ನಬ್ ಗೋಸ್ವಾಮಿ ಪ್ರಯಾಣಿಸುತ್ತಿದ್ದ ವಿಮಾನದ ಪೈಲಟ್ ಇಂಡಿಗೋ ಮ್ಯಾನೇಜ್ ಮೆಂಟ್ ಗೆ ಪತ್ರ ಬರೆದಿದ್ದಾರೆ.

"ಸಾಮಾಜಿಕ ಜಾಲತಾಣದ ಪೋಸ್ಟ್ ಗಳ ಆಧಾರದಲ್ಲಿ ವಿಮಾನಯಾನ ಸಂಸ್ಥೆಯು ಕ್ರಮ ಕೈಗೊಂಡಿದೆ ಎಂದು ತಿಳಿದು ಬೇಸರಗೊಂಡಿದ್ದೇನೆ" ಎಂದವರು ಹೇಳಿದ್ದಾರೆ.

"ಆ ವಿಮಾನದ ಕ್ಯಾಪ್ಟನ್ ಆಗಿ ನಡೆದ ಘಟನೆಯು ರಿಪೋರ್ಟ್ ಮಾಡುವಂತಹದ್ದಲ್ಲ. ಕಾಮ್ರಾರ ನಡತೆಯು ಅಸಭ್ಯತನವಾಗಿರಲಿಲ್ಲ" ಎಂದವರು ಇಂಡಿಗೋಗೆ ಬರೆದಿರುವ ಇ ಮೇಲ್ ನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News