1.30 ಲಕ್ಷ ರೂ. ಮೌಲ್ಯದ ಚಿನ್ನದ ಸರ ಕಳವು

Update: 2020-02-03 18:36 GMT

ಮೈಸೂರು, ಫೆ.3: ಮನೆಯಲ್ಲಿರಿಸಿದ್ದ 1.30 ಲಕ್ಷ ರೂ.ಮೌಲ್ಯದ ಚಿನ್ನದ ಸರ ಕಳುವಾಗಿದ್ದು, ಮನೆ ಕೆಲಸಕ್ಕೆ ಬರುವ ಮಹಿಳೆಯ ಮೇಲೆ ಅನುಮಾನ ವ್ಯಕ್ತಪಡಿಸಿ ವೃದ್ಧೆಯೋರ್ವರು ದೂರು ನೀಡಿದ್ದಾರೆ.

ಆಲನಹಳ್ಳಿ ಬಡಾವಣೆ ಲಲಿತ್ ಮಹಲ್ ನಗರ ನಿವಾಸಿ ವತ್ಸಲಾ ಎಂಬವರೇ ಸರ ಕಳೆದುಕೊಂಡು ದೂರು ನೀಡಿದವರಾಗಿದ್ದು, ಇವರು ಒಂಟಿಯಾಗಿ ವಾಸವಿದ್ದರು. ಜ.26ರಂದು ಕಾರ್ಯನಿಮಿತ್ತ ಹೊರಗೆ ಹೋಗಿದ್ದು, ರಾತ್ರಿ ಆಯಾಸವಾಗಿದ್ದರಿಂದ ಕತ್ತಿನಲ್ಲಿದ್ದ 40 ಗ್ರಾಂ ತೂಕದ ಎರಡೆಳೆಯ ಅಂಜಲಿ ಮಾದರಿಯ ಚಿನ್ನದ ಸರವನ್ನು ತೆಗೆದು ತಲೆ ದಿಂಬಿನ ಕೆಳಗೆ ಇರಿಸಿ ಮಲಗಿದ್ದರು. ಜ.27ರಂದು ಬೆಳಗ್ಗೆ ಸರ ನಾಪತ್ತೆಯಾಗಿದ್ದು ಗೊತ್ತಾಗಿದೆ.

ಮನೆಯಲ್ಲಿ ಯಾರೂ ಇಲ್ಲವೆಂದು ಪುಟ್ಟಮ್ಮ ಎಂಬವರನ್ನು ಮನೆಗೆಲಸಕ್ಕೆ ಸಹಾಯಕ್ಕಾಗಿ ನೇಮಿಸಿಕೊಂಡಿದ್ದೆ. ಮನೆಕೆಲಸದಾಕೆಯೇ ಕಳ್ಳತನ ಮಾಡಿಕೊಂಡು ಹೋಗಿರುವ ಅನುಮಾನವಿದೆ ಎಂದು ದೂರಿನಲ್ಲಿ ತಿಳಿಸಿದ್ದು, ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News