ಸಾಲಬಾಧೆ: ನೇಣಿಗೆ ಶರಣಾದ ರೈತ

Update: 2020-02-04 18:39 GMT

ದಾವಣಗೆರೆ, ಫೆ.4: ಸಾಲಬಾದೆ ತಾಳಲಾರದೆ ಜಿಲ್ಲೆಯ ಜಗಳೂರು ತಾಲೂಕಿನ ಸಕಲಾಪುರ ಗೊಲ್ಲರಹಟ್ಟಿ ಗ್ರಾಮದ ರೈತರೊರ್ವರು ನೇಣಿಗೆ ಶರಣಾದ ಘಟನೆ ನಡೆದಿದೆ. 

ಕಾಟಪ್ಪ (40) ಸಾವಿಗೆ ಶರಣಾದ ರೈತ. ಕಾಟಪ್ಪ ಖಾಸಗಿಯಾಗಿ ನಾಲ್ಕು ಲಕ್ಷ ರೂ. ಸಾಲಮಾಡಿದ್ದರು. ಸಾಲದಿಂದ ಬೇಸತ್ತು ಸೋಮವಾರ ರಾತ್ರಿ ವೇಳೆ ಮನೆಯ ಹೊರಗಿನ ಕೋಣೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಕಾಟಪ್ಪ ಪತ್ನಿ ಮತ್ತು ಮೂರು ಜನ ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. 

ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News