ಖಾತೆಗಳ ಬಗ್ಗೆ ಜೆಡಿಎಸ್ ಸುಳ್ಳು ಸುದ್ದಿ: ಸಚಿವ ನಾರಾಯಣಗೌಡ ಆರೋಪ

Update: 2020-02-15 12:27 GMT

ಬೆಂಗಳೂರು, ಫೆ. 15: ‘ಮುಖ್ಯಮಂತ್ರಿ ಯಡಿಯೂರಪ್ಪನವರು ನೀಡಿರುವ ಖಾತೆಗಳ ಬಗ್ಗೆ ನನಗೆ ಯಾವುದೇ ರೀತಿಯ ಅಸಮಾಧಾನವಿಲ್ಲ. ಆದರೆ, ಜೆಡಿಎಸ್ ಅನಗತ್ಯ ಸುಳ್ಳು ಸುದ್ದಿ ಹಬ್ಬಿಸುತ್ತಿದೆ’ ಎಂದು ಪೌರಾಡಳಿತ, ತೋಟಗಾರಿಕೆ ಮತ್ತು ರೇಶ್ಮೆ ಸಚಿವ ಕೆ.ಸಿ.ನಾರಾಯಣಗೌಡ ಆರೋಪಿಸಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಖಾತೆ ಬಗ್ಗೆ ನನಗೆ ಅಸಮಾಧಾನವಿದೆ ಎಂದು ನಿಮಗೆ ಯಾರು ಹೇಳಿದ್ದು ಎಂದು ಪ್ರಶ್ನಿಸಿದ ಅವರು, ಸಿಎಂ ನೀಡಿರುವ ಖಾತೆಯನ್ನು ನಾನು ಅತ್ಯಂತ ಸಂತೋಷದಿಂದ ಪಡೆದಿದ್ದೇನೆ ಎಂದರು.

ಯಡಿಯೂರಪ್ಪನವರು ನನಗೆ 3 ಖಾತೆಗಳನ್ನು ನೀಡಿದ್ದು, ಒಳ್ಳೆಯ ಖಾತೆಗಳನ್ನೆ ಕೊಟ್ಟಿದ್ದಾರೆ. ಅವರಿಗೆ ಈ ಸಂದರ್ಭದಲ್ಲಿ ನಾನು ಅಭಿನಂದನೆ ಸಲ್ಲಿಸುತ್ತೇನೆ. ಆದರೆ, ನನ್ನ ವಿರುದ್ಧ ಗೊಂದಲಗಳನ್ನು ಯಾರು ಮತ್ತು ಏಕೆ ಹುಟ್ಟು ಹಾಕುತ್ತಿದ್ದಾರೆ ಎಂದು ನನಗೆ ಗೊತ್ತಿಲ್ಲ. ಇದರ ಹಿಂದೆ ಜೆಡಿಎಸ್ ಕೈವಾಡವಿರುವುದು ಸ್ಪಷ್ಟ ಎಂದು ದೂರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News