ಮೈಸೂರು: ಮೇಯರ್ ತಸ್ನೀಂ ನಗರ ಪ್ರದಕ್ಷಿಣೆ; ರೈತರ ಜೊತೆ ಸಭೆ

Update: 2020-02-15 17:54 GMT

ಮೈಸೂರು,ಫೆ.15: ಮೈಸೂರು ಮಹಾನಗರ ಪಾಲಿಕೆ ಮೇಯರ್ ತಸ್ನೀಂ ಇಂದು ಬೆಳ್ಳಂಬೆಳಗ್ಗೆಯೇ ನಗರ ಪ್ರದಕ್ಷಿಣೆ ನಡೆಸಿ ತರಕಾರಿ ಮಾರುಕಟ್ಟೆ ಪರಿಶೀಲನೆ ಜೊತೆ ರೈತರು ವ್ಯಾಪಾರಿಗಳ ಜತೆ ಸಭೆ ನಡೆಸಿದರು.

ನಗರದ ಎಂ.ಜಿ ರಸ್ತೆಯ ತರಕಾರಿ ಮಾರುಕಟ್ಟೆಗೆ ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳ ಜತೆ ಶನಿವಾರ ಭೇಟಿ ನೀಡಿದ ಮೇಯರ್ ತಸ್ನೀಂ ಪರಿಶೀಲನೆ ನಡೆಸಿದರು. ಮಾರುಕಟ್ಟೆಯ ಕಸದ ಸಮಸ್ಯೆ ಹಾಗೂ ಸಂಚಾರದ ಕಿರಿಕಿರಿಯ ಕುರಿತು ದೂರು ಬಂದಿದ್ದ ಹಿನ್ನಲೆಯಲ್ಲಿ ಭೇಟಿ ನೀಡಿದ ಮೇಯರ್ ತಸ್ನೀಂ ಮಾರುಕಟ್ಟೆಯಲ್ಲಿ ರೈತರು, ವ್ಯಾಪಾರಿಗಳ ಜೊತೆ ಸಭೆ ನಡೆಸಿ ಚರ್ಚಿಸಿದರು.

ಇದೇ ವೇಳೆ ಮಾರುಕಟ್ಟೆಯಲ್ಲಿ ಸಂಪೂರ್ಣವಾಗಿ ಪ್ಲಾಸ್ಟಿಕ್ ನಿಷೇಧ ಮಾಡಬೇಕು. ಕಸ ವಿಲೇವಾರಿಗೆ ಪ್ರತ್ಯೇಕ ಸುಂಕ ವಸೂಲಿ ಮಾಡಿ ಮಾರುಕಟ್ಟೆ ಸಂಘದಿಂದಲೇ ನಿರ್ವಹಣೆ ಮಾಡುವಂತೆ ಅಧಿಕಾರಿಗಳಿಗೆ ಮೇಯರ್ ತಸ್ನೀಂ ಸೂಚನೆ ನೀಡಿದರು. ಮೇಯರ್ ತಸ್ನೀಂ ಗೆ ಅರೋಗ್ಯ ಅಧಿಕಾರಿ ಡಾ.ನಾಗರಾಜ್ ಸೇರಿದಂತೆ ಪಾಲಿಕೆ ಅಧಿಕಾರಿಗಳು ಸಾಥ್ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News