ಆಕಸ್ಮಿಕವಾಗಿ ಆಕಳನ್ನು ಕೊಂದ ವ್ಯಕ್ತಿಗೆ ಪುತ್ರಿಯನ್ನೇ ಮದುವೆಯಾಗುವಂತೆ ಆದೇಶ ನೀಡಿದ ಪಂಚಾಯತ್ !

Update: 2020-02-16 11:33 GMT

ಭೋಪಾಲ್: ಆಕಸ್ಮಿಕವಾಗಿ ಆಕಳೊಂದನ್ನು ಕೊಂದ ವ್ಯಕ್ತಿಯೊಬ್ಬನಿಗೆ ಪ್ರಾಯಶ್ಚಿತವಾಗಿ ತನ್ನ ಅಪ್ರಾಪ್ತ ಮಗಳನ್ನೇ ಮದುವೆಯಾಗುವಂತೆ ಪಂಚಾಯತ್ ಒಂದು ಆದೇಶ ನೀಡಿದ ಘಟನೆ ನಡೆದಿದೆ. ಆದರೆ ಕೂಡಲೇ ಈ ಬಗ್ಗೆ ಕ್ರಮ ಕೈಗೊಂಡ ಪೊಲೀಸ್ ಮತ್ತು ಸ್ಥಳೀಯ ಆಡಳಿತ ಮದುವೆಯನ್ನು ನಿಲ್ಲಿಸಿದೆ.

ಮಧ್ಯಪ್ರದೇಶದ ವಿದಿಶಾ ಜಿಲ್ಲೆಯ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದೆ.

ಆಕಸ್ಮಿಕವಾಗಿ ಹಸುಗಳನ್ನು ಕೊಂದ ವ್ಯಕ್ತಿಗೆ ಅಥವಾ ಆತನ ಕುಟುಂಬದ ಮೇಲೆ ವಿಧಿಸುವ ಇಲ್ಲಿನ ಸಾಮಾನ್ಯ ಶಿಕ್ಷೆ ಇದಾಗಿದೆ ಎಂದು ವರದಿಯಾಗಿದೆ. ಇಷ್ಟೇ ಅಲ್ಲದೆ ತಪ್ಪೆಸಗಿದವನಿಗೆ ಗಂಗಾ ನದಿಯಲ್ಲಿ ಮುಳುಗಿ ಏಳುವಂತೆ ಮತ್ತು ಗ್ರಾಮಸ್ಥರಿಗೆ ಊಟ ಹಾಕುವಂತೆ ಹೇಳಲಾಗುತ್ತದೆ. ಕೆಲವೊಮ್ಮೆ ಪುತ್ರಿಗೆ ಯಾವುದೇ ವಯಸ್ಸಾದರೂ ಆಕೆಯನ್ನು ಮದುವೆಯಾಗುವಂತೆ ತಂದೆಗೆ ಹೇಳಲಾಗುತ್ತದೆ.

ತನ್ನ ಇಬ್ಬರು ಪುತ್ರಿಯರೊಂದಿಗೆ ಈ ವ್ಯಕ್ತಿ ತೆರಳುತ್ತಿದ್ದಾಗ ಬೈಕ್ ಢಿಕ್ಕಿ ಹೊಡೆದು ಆಕಳು ಸಾವನ್ನಪ್ಪಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News