ಕಪಿಲ್ ಮಿಶ್ರಾ ಹೇಳಿಕೆ ಬಗ್ಗೆ ಕೇಂದ್ರದ ಮೌನ ಅಪಮಾನಕರ: ಪ್ರಿಯಾಂಕಾ ಗಾಂಧಿ ವಾದ್ರಾ
Update: 2020-02-27 05:53 GMT
ಹೊಸದಿಲ್ಲಿ, ಫೆ. 26: ಬಿಜೆಪಿ ನಾಯಕ ಕಪಿಲ್ ಮಿಶ್ರಾ ಹೇಳಿರುವುದು ಅಪಮಾನಕರ. ಆದರೆ, ಈ ಬಗ್ಗೆ ಸರಕಾರ ವೌನ ವಹಿಸಿರುವುದು ಇನ್ನಷ್ಟು ಅಪಮಾನಕರ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಬುಧವಾರ ಹೇಳಿದ್ದಾರೆ.
ದಿಲ್ಲಿಯ ಹಿಂಸಾಚಾರದ ಹೊಣೆ ಹೊತ್ತು ಕೇಂದ್ರದ ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆಗ್ರಹಿಸಿದ ಕೆಲವೇ ನಿಮಿಷಗಳ ಬಳಿಕ ಪ್ರಿಯಾಂಕಾ ಗಾಂಧಿ ಅವರು ಈ ಹೇಳಿಕೆ ನೀಡಿದ್ದಾರೆ. ಅಲ್ಲದೆ, ಹಿಂಸಾಚಾರದಿಂದ ದೂರ ಸರಿಯುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.
ಹಿಂಸಾಚಾರದಿಂದ ನೀವೇ ತೊಂದರೆಗೆ ಒಳಗಾಗುವುದರಿಂದ ಯಾವುದೇ ರೀತಿಯ ಹಿಂಸಾಚಾರದಲ್ಲಿ ತೊಡಗಿಕೊಳ್ಳಬೇಡಿ ಎಂದು ಪ್ರಿಯಾಂಕಾ ಗಾಂಧಿ ವಾದ್ರ ದಿಲ್ಲಿಯ ಜನರಲ್ಲಿ ಮನವಿ ಮಾಡಿದ್ದಾರೆ.