ಜನರ ಗೋರಿಯ ಮೇಲೆ ದಿಲ್ಲಿ ಕಟ್ಟಲು ಸಾಧ್ಯವಿಲ್ಲ: ಅರವಿಂದ ಕೇಜ್ರಿವಾಲ್

Update: 2020-02-27 05:51 GMT

ಹೊಸದಿಲ್ಲಿ, ಫೆ. 26: ಜನರ ಗೋರಿಯ ಮೇಲೆ ಆಧುನಿಕ ದಿಲ್ಲಿಯನ್ನು ನಿರ್ಮಿಸಲು ಸಾಧ್ಯವಿಲ್ಲ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.

 ದಿಲ್ಲಿ ವಿಧಾನ ಸಭೆಯಲ್ಲಿ ಬುಧವಾರ ಮಾತನಾಡಿದ ಅವರು, ದಿಲ್ಲಿಯಲ್ಲಿ ಗಲಭೆಗೆ ಉತ್ತೇಜನ ನೀಡಿದವರು ಹೊರಗಿನಿಂದ ಬಂದ ದುಷ್ಕರ್ಮಿಗಳು ಎಂದರು. ದಿಲ್ಲಿಯ ಜನರು ಶಾಂತಿ ಬಯಸುವವರು. ಪ್ರತಿಯೊಬ್ಬರು ಶಾಂತಿ ಬಯಸುತ್ತಾರೆ. ಯಾರೊಬ್ಬರೂ ಗಲಭೆ ಮಾಡುವುದನ್ನು ಬಯಸುವುದಿಲ್ಲ. ನಮ್ಮ ಮಕ್ಕಳಿಗಾಗಿ ಉತ್ತಮ ದಿಲ್ಲಿಯನ್ನು ರೂಪಿಸಲು ಪ್ರಯತ್ನಿಸಬೇಕು ಎಂದು ಅವರು ಹೇಳಿದರು.

ದಿಲ್ಲಿಯ ಸಾಮಾನ್ಯ ಜನರು ಗಲಭೆಯಲ್ಲಿ ಭಾಗಿಯಾಗಿಲ್ಲ. ದಿಲ್ಲಿಯ ಹೊರಗಿನ ಜನರು ರಾಜಕೀಯ ವ್ಯಕ್ತಿಗಳು ಹಾಗೂ ದುಷ್ಕರ್ಮಿಗಳು ಇಲ್ಲಿನ ಗಲಭೆಗೆ ಕಾರಣ. ದಿಲ್ಲಿಯಲ್ಲಿ ಶಾಂತಿ ಸುವ್ಯವಸ್ಥೆ ಮರು ಸ್ಥಾಪಿಸಲು ಸೇನೆಗೆ ಕರೆ ನೀಡುವುದು ಅಗತ್ಯ ಎಂದು ಕೇಜ್ರಿವಾಲ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News