ಹನೂರು: ಸಹಕಾರ ಸಂಘದ ಅಧ್ಯಕ್ಷರಾಗಿ ಪರಶಿವ ಅವಿರೋಧ ಆಯ್ಕೆ

Update: 2020-03-09 18:44 GMT

ಹನೂರು: ತಾಲೂಕಿನ ಭದ್ರಯ್ಯನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಪರಶಿವ ಮತ್ತು ಉಪಾಧ್ಯಕ್ಷರಾಗಿ ಕರಿಗೌಡ ಅವಿರೋಧವಾಗಿ ಆಯ್ಕೆಯಾದರು.

13 ಜನ ನಿರ್ದೇಶಕರಿರುವ ಸಂಘದಲ್ಲಿ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಶನಿವಾರ ಚುನಾವಣೆ ನೆಡೆಯಿತು. ಇದರಲ್ಲಿ ಈ ಎರಡು ಸ್ಥಾನಕ್ಕೆ ಬೇರೆ ಯಾರು ಕೂಡ ನಾಮಪತ್ರ ಸಲ್ಲಿಸದೇ ಇರುವುದರಿಂದ ಅಧ್ಯಕ್ಷರಾಗಿ ಪರಶಿವ ಮತ್ತು ಉಪಾಧ್ಯಕ್ಷರಾಗಿ ಕರಿಗೌಡ ಅವಿರೋಧವಾಗಿ ಆಯ್ಕೆಯಾದರು.

ಚುನಾವಣಾಧಿಕಾರಿಯಾಗಿ ಸಹಕಾರ ಇಲಾಖೆಯ ನಾಗೇಶ್, ಬ್ಯಾಂಕ್‍ನ ಮೇಲ್ವಿಚಾರಕರಾದ ಸತೀಶ್, ಸಂಘದ ಸಿ.ಇ.ಒ ನಾಗರಾಜು ಕಾರ್ಯನಿರ್ವಹಿಸಿದರು. ಅಲ್ಲದೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಎಲ್ಲಾ ನಿರ್ದೇಶಕರು, ಜಿಪಂ ಸದಸ್ಯೆ ಮಂಜುಳಾ ರಂಗಸ್ವಾಮಿ ಶುಭ ಹಾರೈಸಿ ಅಭಿನಂಧಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News