ಶಿವಮೊಗ್ಗ: ಕಾರ್ಖಾನೆಯ ಮೆಷಿನ್ ಗೆ ಸಿಲುಕಿ ಯುವಕ ಮೃತ್ಯು

Update: 2020-03-10 06:25 GMT

ಶಿವಮೊಗ್ಗ : ಕಾರ್ಖಾನೆಯ ಮೆಷಿನ್ ಬಳಿ ಕೆಲಸ ಮಾಡುತ್ತಿದ್ದ ವೇಳೆ ಯುವ ಕಾರ್ಮಿಕ  ಸಾವನ್ನಪ್ಪಿರುವ ಘಟನೆ ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.

ಮೃತರನ್ನು ಚೇತನ್(30) ಎಂದು ಗುರುತಿಸಲಾಗಿದ್ದು, ರಾತ್ರಿ ಪಾಳಿಯಲ್ಲಿ  ಕೆಲಸ ಮಾಡುತ್ತಿದ್ದರು.

ಶಾಂತಲಾ ಸ್ಪೇರ್ ಕಾಸ್ಟ್ ಕೈಗಾರಿಕೆಯಲ್ಲಿ ಸೋಮವಾರ ರಾತ್ರಿ 10-30 ರ ವೇಳೆ ಲೇತ್ ಮೆಷಿನ್ ಬಳಿ ಕೆಲಸ ಮಾಡುತ್ತಿದ್ದ ಮೆಷಿನ್ ಕಾರ್ಮಿಕನನ್ನು ಎಳೆದುಕೊಂಡಿದೆ. ಪರಿಣಾಮ ಗಂಭೀರ ಗಾಯಗಳಾಗಿದ್ದು, ಆವರನ್ನು ಮೆಗ್ಗಾನ್ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಾಗ ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News