ಶಿವಮೊಗ್ಗದಲ್ಲಿ ಸಚಿವರಿಂದಲೇ ನಿಯಮ ಉಲ್ಲಂಘನೆ ಆರೋಪ

Update: 2020-03-28 06:00 GMT

ಶಿವಮೊಗ್ಗ, ಮಾ.28: ಶಿವಮೊಗ್ಗದಲ್ಲಿ  ಗ್ರಾಮಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಸಾಮಾಜಿಕ ಅಂತರದ ನಿಯಮ ಉಲ್ಲಂಘಿಸಿರುವ ಆರೋಪ ಕೇಳಿ ಬಂದಿದೆ,

ನಗರದಲ್ಲಿ  ಶನಿವಾರ ನಗರ  ರೌಂಡ್ಸ್ ವೇಳೆ ಸಚಿವ ಈಶ್ವರಪ್ಪ ಅವರಿಂದ ಸಾಮಾಜಿಕ ಅಂತರದ ನಿಯಮ ಉಲ್ಲಂಘನೆಯಾಗಿದೆ ಎನ್ನಲಾಗಿದೆ.

ಸಾಮಾಜಿಕ ಅಂತರ ಕಾಪಾಡುವಂತೆ ಸಚಿವ ಈಶ್ವರಪ್ಪ ಜನರಿಗೆ ಮನವಿ ಮಾಡುವಾಗ ಮೇಯರ್, ಅಧಿಕಾರಿಗಳೊಂದಿಗೆ ಗುಂಪು ಕಟ್ಟಿಕೊಂಡು ತೆರಳಿದ್ದರು.  ಅಂತರ ಕಾಯ್ದುಕೊಳ್ಳಲಿಲ್ಲ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News