'ಬೇರೇನೂ ಬೇಡ, ನಮಗೆ ಊಟ ಕೊಡಿ....': ಅಲೆಮಾರಿ ಕುಟುಂಬಗಳ ಅಳಲು

Update: 2020-04-11 17:17 GMT
ಸಾಂದರ್ಭಿಕ ಚಿತ್ರ

ರಾಯಚೂರು, ಎ.11: ಕೊರೋನ ವೈರಸ್ ಸೋಂಕು ನಿಯಂತ್ರಣಕ್ಕೆ ಲಾಕ್‍ಡೌನ್ ಜಾರಿಯಾದ ಬೆನ್ನಲ್ಲೇ ಹಲವು ಜನರ ಜೀವನದ ಮೇಲೆ ಪರಿಣಾಮ ಬೀರಿದ್ದು, ಅದರಂತೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಪಟ್ಟಣದಲ್ಲಿರುವ 20ಕ್ಕೂ ಹೆಚ್ಚು ಅಲೆಮಾರಿ ಕುಟುಂಬಗಳು 'ನಿಮ್ಮಿಂದ ನಮಗೆ ಏನೂ ಬೇಡ. ಆದರೆ, ಊಟವನ್ನು ನೀಡಿ' ಎಂದು ಅಂಗಲಾಚಿ ಮನವಿ ಮಾಡಿಕೊಂಡಿದ್ದಾರೆ.

ದೇವದುರ್ಗ ತಾಲೂಕಿನ ಜಾಲಹಳ್ಳಿಯ ಸಾರ್ವಜನಿಕ ಆಸ್ಪತ್ರೆಯ ಹಿಂದೆ ಸುಮಾರು 20ಕ್ಕೂ ಹೆಚ್ಚು ಅಲೆಮಾರಿ ಕುಟುಂಬಗಳು ವಾಸಿಸುತ್ತಿದ್ದು, ಲಾಕ್‍ಡೌನ್‍ನಿಂದಾಗಿ ಊಟಕ್ಕೂ ಪರದಾಡುವಂತಹ ಪರಿಸ್ಥಿತಿ ಬಂದಿದೆ. ಹೀಗಾಗಿ, ಈ ಕುಟುಂಬಗಳು ನಿಮ್ಮಿಂದ ನಮಗೆ ಏನೂ ಬೇಡ. ಆದರೆ, ಊಟವನ್ನು ಕೊಟ್ಟು ನಮ್ಮನ್ನು ಬದುಕಿಸಿ ಎಂದು ಅಳಲು ತೋಡಿಕೊಂಡಿದ್ದಾರೆ.

ಕೊರೋನ ಲಾಕ್‍ಡೌನ್ ಬಳಿಕ ಅಲೆಮಾರಿ ಜನರು ಎಲ್ಲಿಗೂ ಹೋಗಲಾರದೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಪರದಾಡುತ್ತಿದ್ದಾರೆ. 'ಕಳೆದ 15 ದಿನಗಳಿಂದ ತಾಲೂಕು ಆಡಳಿತ ಅಥವಾ ಶಾಸಕರು ಯಾರೂ ನಮ್ಮ ನೆರವಿಗೆ ಬರಲಿಲ್ಲ. ಬೇರೆ ಯಾರೂ ನಮ್ಮ ಗೋಳು ಕೇಳಿ ಸಹಾಯ ಮಾಡೋರಿಲ್ಲ' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News