ಆಶಾ ಕಾರ್ಯಕರ್ತೆ ಮೇಲೆ ಹಲ್ಲೆ ಆರೋಪ: ಜೆಡಿಎಸ್ ಮುಖಂಡ ಧನಂಜಯ್ ಬಂಧನ

Update: 2020-04-23 18:40 GMT

ಬೆಂಗಳೂರು, ಎ.23: ಇಲ್ಲಿನ ಲಗ್ಗೆರೆಯಲ್ಲಿ ಆಶಾ ಕಾರ್ಯಕರ್ತೆಯ ಮೇಲೆ ಹಲ್ಲೆ ಮಾಡಿರುವ ಆರೋಪದಡಿ ಜೆಡಿಎಸ್ ಮುಖಂಡ ಧನಂಜಯ್ ಎಂಬಾತನನ್ನು ನಂದಿನಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ಆಶಾ ಕಾರ್ಯಕರ್ತೆಯರ ಬಳಿ ಸ್ಯಾನಿಟೈಜರ್ ಕುರಿತು ಪ್ರಶ್ನೆ ಕೇಳಿ ಧನಂಜಯ್ ಮೊಬೈಲ್‍ನಲ್ಲಿ ವಿಡಿಯೊ ಸೆರೆ ಹಿಡಿದಿದ್ದ. ತದನಂತರ, ಆಶಾಕಾರ್ಯಕರ್ತೆ ಶಶಿಕಲಾ ಅವರ ಹೇಳಿಕೆ ಅನ್ನು ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ ಎನ್ನಲಾಗಿದೆ.

ಈ ವಿಡಿಯೊ ಅನ್ನು ಸಾಮಾಜಿಕ ಜಾಲತಾಣಗಳಿಂದ ತೆಗೆಯುವಂತೆ ಶಶಿಕಲಾ ಲಗ್ಗೆರೆ ಜೆಡಿಎಸ್ ಕಚೇರಿಗೆ ಹೋದಾಗ ಧನಂಜಯ್ ಅವಾಚ್ಯ ಶಬ್ಧ ಬಳಸಿ ನಿಂದಿಸಿ, ಪತ್ನಿಯ ಮೂಲಕ ಹಲ್ಲೆಗೆ ಪ್ರಚೋದನೆ ನೀಡಿದ್ದಾರೆಂದು ಆರೋಪಿಸಿ ನಂದಿನಿ ಲೇಔಟ್ ಪೊಲೀಸ್ ಠಾಣೆಗೆ ಶಶಿಕಲಾ ದೂರು ನೀಡಿದ್ದರು. ದೂರಿನ ಅನ್ವಯ ಪೊಲೀಸರು ಧನಂಜಯ್‍ನನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News