ಗಜೇಂದ್ರಗಡ ಪುರಸಭೆ: ಕಾಂಗ್ರೆಸ್ ಸದಸ್ಯರಿಂದ ಆಹಾರದ ಕಿಟ್ ವಿತರಣೆ

Update: 2020-05-05 14:58 GMT

ಗದಗ, ಮೇ 5: ಜಿಲ್ಲೆಯ ಗಜೇಂದ್ರಗಡ ಪುರಸಭೆಯ ಚುನಾಯಿತ ಕಾಂಗ್ರೆಸ್‌ನ ಐವರು ಸದಸ್ಯರಿಂದ ಗಜೇಂದ್ರಗಡ ಹಡಪದ ಅಪ್ಪಣ್ಣ ಸಮಾಜದ ಬಡ ಕುಟುಂಬಗಳು ಹಾಗೂ ಶಾಮಿಯಾನ ಸಪ್ಲಾಯರ್ಸ್ ಸಂಘದವರಿಗೆ ಪಟ್ಟಣದ ಮೈಸೂರು ಮಠದಲ್ಲಿ ಮಂಗಳವಾರ ಆಹಾರದ ಕಿಟ್ ವಿತರಿಸಲಾಯಿತು.

ದವಸ ಧಾನ್ಯ ಹಾಗೂ ತರಕಾರಿ ಸಹಿತ ಆಹಾರದ ಕಿಟ್ ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಪುರಸಭೆ ಸದಸ್ಯ ರಾಜು ಸಾಂಗ್ಲಿಕರ್, ಕೊರೋನ ವೈರಸ್ ಭೀತಿಯಿಂದಾಗಿ ಬಡ ಕುಟುಂಬಗಳು ಸಂಕಷ್ಟಕ್ಕೀಡಾಗಿವೆ. ಆರ್ಥಿಕವಾಗಿ ಸಬಲ ಇದ್ದವರು ಬಡವರ ಸಹಾಯಕ್ಕೆ ಧಾವಿಸಬೇಕು. ಸರಕಾರವು ಹೆಚ್ಚಿನ ಸಹಾಯಧನ ನೀಡುವಂತೆ ಸ್ಥಳೀಯ ಶಾಸಕರು ಒತ್ತಾಯಿಸಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯರಾದ ಶಿವರಾಜ್ ಘೋರ್ಪಡೆ, ಮರ್ತುಜ ಡಾಲಾಯತ್, ವೆಂಕಟೇಶ್ ಮುದಗಲ್, ಶ್ರೀಧರ್ ಬಿದರಳ್ಳಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News