ಎಸ್.ಕೆ. ಮುಹಮ್ಮದ್ ಕುಂಞಿಮೋನು
Update: 2020-05-23 09:44 GMT
ಮಂಗಳೂರು, ಮೇ 23: ಮೂಲತಃ ಶಿರ್ತಾಡಿಯ ಸದ್ಯ ಬಜ್ಪೆಯಲ್ಲಿ ವಾಸವಾಗಿದ್ದ ನಗರದ ಸೆಂಟ್ರಲ್ ಮಾರ್ಕೆಟ್ನ ಬಾಳೆಹಣ್ಣು ವ್ಯಾಪಾರಿ ಎಸ್.ಕೆ.ಮುಹಮ್ಮದ್ ಕುಂಞಿಮೋನು (62)ಗುರುವಾರ ಹೃದಯಘಾತದಿಂದ ನಿಧನರಾಗಿದ್ದಾರೆ.
ಮೃತರು ಪತ್ನಿ ಮತ್ತು ನಾಲ್ವರು ಪುತ್ರಿಯರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಬಜ್ಪೆಈದ್ಗಾ ಮಸ್ಜಿದ್ ವಠಾರದಲ್ಲಿ ಶುಕ್ರವಾರ ದಫನ ಕಾರ್ಯ ನೆರವೇರಿಸಲಾಯಿತು.