ಮಡಿಕೇರಿ: ನಿಶ್ಯಕ್ತಿಯಿಂದ ನವವಿವಾಹಿತನ ಸಾವು; ಆರೋಗ್ಯ ಇಲಾಖೆ ಸ್ಪಷ್ಟನೆ

Update: 2020-05-31 15:35 GMT

ಮಡಿಕೇರಿ, ಮೇ.31: ಮಡಿಕೇರಿ ತಾಲೂಕಿನ ಚೆಂಬು ಗ್ರಾಮದ ಆನೆಹಳ್ಳದ ನಿವಾಸಿ ನವವಿವಾಹಿತ ಚಂದ್ರಶೇಖರ್ ಎಂಬುವವರು ನಿಶ್ಯಕ್ತಿಯಿಂದ ಮೃತಪಟ್ಟಿರುವುದಾಗಿ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ಶಿವಕುಮಾರ್ ಎಂ. ಸ್ಪಷ್ಟಪಡಿಸಿದ್ದಾರೆ.

ಅತಿಯಾದ ಮದ್ಯಪಾನ ಮತ್ತು ತಂಬಾಕು ಸೇವನೆಯಿಂದ ನಿಶ್ಯಕ್ತರಾಗಿದ್ದ ಚಂದ್ರಶೇಖರ್ ಅವರು ಮೇ 29 ರಂದು ಮೃತಪಟ್ಟಿದ್ದಾರೆ ಹೊರತು ಬೇರೆ ಯಾವುದೇ ಕಾರಣದಿಂದ ಅಲ್ಲ. ಆದರೆ ಮರಣೋತ್ತರ ಪರೀಕ್ಷೆಯ ವರದಿಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News