ಗುಂಡ್ಲುಪೇಟೆ ತ್ರಿವಳಿ ಹತ್ಯೆ ಪ್ರಕರಣ: 15 ಆರೋಪಿಗಳ ಬಂಧನ

Update: 2020-06-04 19:00 GMT

ಚಾಮರಾಜನಗರ, ಜೂ.5: ಇಡೀ ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿದ್ದ ತ್ರಿವಳಿ ಕೊಲೆ ಪ್ರಕರಣವನ್ನು ಪೊಲೀಸರು ಒಂದು ವಾರದಲ್ಲಿಯೇ ಭೇದಿಸಿ 15 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಪಟ್ಟಣದ ಜಾಕೀರ್ ಹುಸೇನ್ ನಗರದಲ್ಲಿ ಹಣಕಾಸು ವಿಚಾರದಲ್ಲಿ ನಡೆದಿದ್ದ ತ್ರಿವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 18 ಆರೋಪಿಗಳನ್ನು ಕಂಡು ಹಿಡಿದು 15 ಆರೋಪಿಗಳನ್ನು ಬಂಧಿಸಿದ್ದಾರೆ. 

ಹಣಕಾಸು ವಿಚಾರದಲ್ಲಿ ಮೇ.26 ರಂದು ರಾತ್ರಿ 8.30 ರಲ್ಲಿ ನಡೆದ ಪ್ರಕರಣದಲ್ಲಿ ಜಕಾವುಲ್ಲ, ಇದ್ರೀಸ್, ಕೈಸರ್ ಕೊಲೆಯಾಗಿದ್ದರು.

ಪ್ರಕರಣದ ಸಂಬಂಧ ಅನ್ಸು, ಅಸ್ಲಂ ಪಾಷಾ, ಅಕ್ರಂ ಪಾಷಾ, ಅನೀಶ್‍ ಪಾಷಾ, ಝಮೀರ್, ಮನ್ಸೂರ್, ಇನಾಯತ್, ಅನ್ವರ್ ಪಾಷಾ, ಏಜಿಯಸ್‍ ಪಾಷಾ, ಮುದಾಸಿರ್, ಫಾರುಕ್, ಸುಹೇಲ್‍ ಪಾಷಾ, ಇದಿಯಾಸ್, ಅಲ್ತಾಫ್, ಮುಜಾಮಿಲ್, ಅಮ್ಜದ್‍ ಪಾಷಾ ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಚಾಮರಾಜನಗರದಲ್ಲಿ ಇಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೆಚ್.ಡಿ.ಆನಂದಕುಮಾರ್ ಸುದ್ದಿಗೋಷ್ಟಿಯಲ್ಲಿ ಹೇಳಿಕೆ ನೀಡಿ, ತ್ರಿವಳಿ ಕೊಲೆ ಪ್ರಕರಣವನ್ನು ಭೇದಿಸಲು ಪೊಲೀಸರು ಹಗಲು ರಾತ್ರಿ ಶ್ರಮಿಸಿದ್ದಾರೆ. ಘಟನೆಗ ಸಂಬಂಧಿಸದಂತೆ ಒಟ್ಟು 18 ಆರೋಪಿಗಳನ್ನು ಕಂಡು ಹಿಡಿದು ಇದೀಗ 15 ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ. ತ್ರಿವಳಿ ಪ್ರಕರಣ ಭೇದಿಸಲು ಡಿವೈಎಸ್ಪಿಗಳ ನೇತೃತ್ವದಲ್ಲಿ ನಾಲ್ಕು ತಂಡ ರಚಿಸಲಾಗಿತ್ತು. ಘಟನೆ ನಡೆದ ಕೆಲವೇ ದಿನಗಳಲ್ಲಿ ಕ್ಷಿಪ್ರ ಕಾರ್ಯಚರಣೆ ನಡೆಸಲಾಗಿತ್ತು ಎಂದು ಆನಂದ ಕುಮಾರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News