ನಕಲಿ ಜಾತಿ ಪ್ರಮಾಣ ಪತ್ರ ಪಡೆದ ಆರೋಪ: ಸಚಿವ ಪ್ರಭು ಚೌಹಾಣ್ ರಿಗೆ ನೋಟಿಸ್ ಜಾರಿ

Update: 2020-06-06 14:57 GMT
ಸಚಿವ ಪ್ರಭು ಚೌಹಾಣ್

ಬೀದರ್, ಜೂ.6: ನಕಲಿ ದಾಖಲೆ ಸೃಷ್ಟಿಸಿ ಜಾತಿ ಪ್ರಮಾಣಪತ್ರ ಪಡೆದ ಆರೋಪ ಸಂಬಂಧ ಪಶು ಸಂಗೋಪನೆ ಸಚಿವ ಪ್ರಭು ಚೌಹಾಣ್ ಅವರಿಗೆ ಈ ಹಿಂದಿನ ಜಿಲ್ಲಾಧಿಕಾರಿ ಎಚ್.ಆರ್.ಮಹಾದೇವ್ ನೋಟಿಸ್ ಜಾರಿ ಮಾಡಿದ್ದಾರೆ.

ಜೂ.3ರಂದು ಈ ನೋಟಿಸ್ ಜಾರಿ ಮಾಡಿದ್ದು, ಇಲ್ಲಿನ ಬಸವಕಲ್ಯಾಣ ತಾಲೂಕಿನ ಯರಬಾಗದ ವಿಜಯಕುಮಾರ ಪುಂಡಲೀಕಪ್ಪ ಅವರು ಮೇ 26ರಂದು ಕರ್ನಾಟಕ ಎಸ್ಸಿ-ಎಸ್ಟಿ ಹಾಗೂ ಹಿಂದುಳಿದ ವರ್ಗಗಳ ತಿದ್ದುಪಡಿ ಕಾಯ್ದೆ 2011ರ ಕಲಂ 4 ಅಡಿ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದಾರೆ. ಹಾಗಾಗಿ, ಒಂದು ತಿಂಗಳಿನೊಳಗೆ ಅರ್ಜಿ ಇತ್ಯರ್ಥಗೊಳಿಸಬೇಕಿದೆ.

ಈ ಸಂಬಂಧ 15 ದಿನಗಳಲ್ಲಿ ಲಿಖಿತ ಉತ್ತರ ನೀಡಬೇಕೆಂದು ನೋಟಿಸ್‍ನಲ್ಲಿ ಉಲ್ಲೇಖ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News