ಗರ್ಭಿಣಿ ಹಸುವಿಗೆ ಸ್ಫೋಟಕ ತಿನ್ನಲು ಕೊಟ್ಟಿದ್ದ ಆರೋಪ: ಓರ್ವನ ಬಂಧನ

Update: 2020-06-07 09:43 GMT
ಸಾಂದರ್ಭಿಕ ಚಿತ್ರ

ಮನಾಲಿ: ಕೇರಳದಲ್ಲಿ ಗರ್ಭಿಣಿ ಆನೆಯೊಂದರ ಸಾವು ಪ್ರಕರಣ ವ್ಯಾಪಕ ಆಕ್ರೋಶ ಸೃಷ್ಟಿಸಿರುವ ನಡುವೆಯೇ ಹಿಮಾಚಲ ಪ್ರದೇಶದಲ್ಲಿ ಗರ್ಭಿಣಿ ಹಸುವೊಂದಕ್ಕೆ ಪಟಾಕಿಗಳು ತುಂಬಿದ್ದ ಗೋಧಿ ಹಿಟ್ಟನ್ನು ನೀಡಲಾಗಿದ್ದು, ಅದು ಸ್ಫೋಟಗೊಂಡ ಪರಿಣಾಮ ಹಸು ಗಾಯಗೊಂಡ ಘಟನೆ ನಡೆದಿದೆ.

ಘಟನೆಗೆ ಸಂಬಂಧಿಸಿ ಒಬ್ಬನನ್ನು ಬಂಧಿಸಲಾಗಿದೆ.

ಹಸುವಿನ ಮಾಲಕ ಗುರುದಯಾಳ್ ಸಿಂಗ್ ವಿಡಿಯೋವೊಂದನ್ನು ಮಾಡಿ ರಕ್ತ ಒಸರುತ್ತಿದ್ದ ಹಸುವನ್ನು ತೋರಿಸಿದ್ದರು. ಈ ಕೃತ್ಯ ಎಸಗಿದ್ದು ತನ್ನ ನೆರೆಮನೆಯ ನಂದಲಾಲ್ ಎಂಬಾತ ಎಂದು ಆರೋಪಿಸಿದ್ದರು. ಘಟನೆಗೆ ಸಂಬಂಧಿಸಿ ನಂದ ಲಾಲ್ ನನ್ನು ಬಂಧಿಸಲಾಗಿದೆ.

ಹಸು ಗುಣಮುಖವಾಗುತ್ತಿದ್ದು, ಕರುವಿಗೆ ಜನ್ಮ ನೀಡಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News