ಕಲಬುರಗಿ : ಯುವಕನ ಹತ್ಯೆಗೈದು ಮೃತದೇಹವನ್ನು ಕಸದ ತೊಟ್ಟಿಗೆ ಎಸೆದು ಪರಾರಿಯಾದ ದುಷ್ಕರ್ಮಿಗಳು

Update: 2020-06-20 08:26 GMT

ಕಲಬುರಗಿ : ಯುವಕನೋರ್ವನನ್ನು ಬರ್ಬರವಾಗಿ ಹತ್ಯೆಗೈದ ದುಷ್ಕರ್ಮಿಗಳು ಮೃತದೇಹವನ್ನು ನಗರದ ಪೀರ್ ಮೈದಾನದ ಕಸದ ತೊಟ್ಟಿಯಲ್ಲಿ ಎಸೆದು ಪರಾರಿಯಾದ ಘಟನೆ ನಡೆದಿದೆ.

ಬುಲಂದ ಫರ್ವೇಝ ಕಾಲನಿಯ ಹಸನ್ ಅಲಿ (22) ಮೃತರು ಎಂದು ಗುರುತಿಸಲಾಗಿದ್ದು, ಶುಕ್ರವಾರ ರಾತ್ರಿ 11 ಗಂಟೆಯ ಸುಮಾರಿಗೆ ಆತನ ಸ್ನೇಹಿತರು ಎಂದು ಹೇಳಲಾದ ತಂಡವೊಂದು ಹಸನ್ ಅವರನ್ನು ಕರೆದುಕೊಂಡು ಹೋಗಿದ್ದು, ಇಂದು ಬೆಳಗ್ಗೆ ಇಲ್ಲಿನ ಪೀರ್ ಮೈದಾನದಲ್ಲಿ ಮೃತದೇಹ ಪತ್ತೆಯಾಗಿದೆ.

ಕೊಲೆಗೆ ನಿಖರ ಕಾರಣ ಮತ್ತು ಕೊಲೆ ಮಾಡಿದ ವ್ಯಕ್ತಿಗಳ ಮಾಹಿತಿ ಸಧ್ಯ ಲಭ್ಯವಾಗಿಲ್ಲ. ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆಳಗ್ಗೆ ಬಡವಾಣೆಯ ಜನರು ವ್ಯಾಯಾಮಕ್ಕೆ ತರಳುತ್ತಿದ ಸಂದರ್ಭ ವಿಷಯ ಬೆಳಕಿಗೆ ಬಂದಿದ್ದು, ಜನರು ಬೆಚ್ಚಿಬಿದ್ದಿದ್ದಾರೆ.

ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News