ಜಮೀನು ವಿಚಾರದಲ್ಲಿ ಕಲಹ: ಮಗನನ್ನು ಕೊಂದು ಠಾಣೆಗೆ ಶರಣಾದ ತಂದೆ

Update: 2020-06-28 18:35 GMT

ಗುಂಡ್ಲುಪೇಟೆ, ಜೂ. 28: ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ತಂದೆಯೇ ಮಗನನ್ನು ಕೊಂದು ಪೊಲೀಸರಿಗೆ ಶರಣಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಹೊನ್ನೇಗೌಡನಹಳ್ಳಿಯಲ್ಲಿ ನಡೆದಿದೆ.

ತಾಲೂಕಿನ ಹೊನ್ನೇಗೌಡನಹಳ್ಳಿ ಗ್ರಾಮದ ಮಲ್ಲಿಕಾರ್ಜುನ (48) ಮೃತರು. ಕೊಲೆಗೈದ ಬಳಿಕ ಆರೋಪಿ ತಂದೆ ಮಹದೇವಪ್ಪ (70)ಪೊಲೀಸ್ ಠಾಣೆಗೆ ಶರಣಾಗಿದ್ದಾರೆ.

ಹಲವು ದಿನಗಳಿಂದ ತಂದೆ- ಮಗನ ನಡುವೆ ಕಲಹ ನಡೆಯುತ್ತಿತ್ತು. ಇಂದು ಮಲ್ಲಿಕಾರ್ಜುನ ತನ್ನ ತಂದೆಯ ಜಮೀನಿನಲ್ಲಿ ಬೆಳೆದಿರುವ ನೀಲಗಿರಿ ಮರ ಕಡಿಯಲು ಹೋದಾಗ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ. ಈ ವೇಳೆ ಮಹದೇವಪ್ಪ ಕಟ್ಟಿಗೆಯಿಂದ ತಲೆಗೆ ಹೊಡೆದು ಕೊಂದಿರುವುದಾಗಿ ತಿಳಿದು ಬಂದಿದೆ.

ಮೃತ ಮಲ್ಲಿಕಾರ್ಜುನ ಪತ್ನಿ ಸವಿತಾ ನೀಡಿದ ದೂರಿನ ಮೇರೆಗೆ ಮಹದೇವಪ್ಪ, ಇಂದ್ರ,‌ ಸುಭಾಸ್, ಶಿವಶಂಕರಪ್ಪ ಹಾಗು ವೀರಭದ್ರಪ್ಪ ಮೇಲೆ ಎಫ್ಐಆರ್ ದಾಖಲಾಗಿದೆ.

ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಮರಣ್ತೋತರ ಪರೀಕ್ಷೆ ನಡೆಸಲಾಯಿತು. ಘಟನಾ ಸ್ದಳಕ್ಕೆ ಸರ್ಕಲ್ ಇನ್ ಪೆಕ್ಟರ್ ಮಹದೇವಸ್ವಾಮಿ, ಗುಂಡ್ಲುಪೇಟೆ ಕ್ರೈಮ್ ಸಬ್ ಇನ್ ಪೆಕ್ಟರ್ ಲಕ್ಷ್ಮಿನಾರಾಯಣ ಹಾಗೂ ತಾಲೂಕು ಪಂಚಾಯತ್ ಸದಸ್ಯರಾದ ಹೆಚ್.ಎನ್.ನಟೇಶ ಭೇಟಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News