ಕಾನ್ಪುರ ಎನ್‌ಕೌಂಟರ್: ಮೂವರು ಪೊಲೀಸರ ಅಮಾನತು

Update: 2020-07-06 09:52 GMT

ಹೊಸದಿಲ್ಲಿ, ಜು.7: ಕಾನ್ಪುರದಲ್ಲಿ ಕಳೆದ ವಾರ ಗ್ಯಾಂಗ್‌ಸ್ಟಾರ್ ವಿಕಾಸ್ ದುಬೆ ಬಂಧನಕ್ಕಾಗಿ ದಾಳಿ ನಡೆಸಿದ್ದ ವೇಳೆ 8 ಪೊಲೀಸರು ಮೃತಪಟ್ಟಿರುವುದಕ್ಕೆ ಸಂಬಂಧಿಸಿ ಉತ್ತರಪ್ರದೇಶದ ಪೊಲೀಸ್ ಇಲಾಖೆಯ ಇಬ್ಬರು ಸನ್ ಇನ್‌ಸ್ಪೆಕ್ಟರ್ ಸಹಿತ ಮೂವರನ್ನು ಅಮಾನತುಗೊಳಿಸಲಾಗಿದೆ.

ದುಬೆಯನ್ನು ಬಂಧಿಸಲು ಮನೆ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದು ಪೊಲೀಸ್ ಇಲಾಖೆಯೇ ನಮಗೆ ಮಾಹಿತಿ ನೀಡಿತ್ತು ಎಂದು ಬಂಧಿತ ದುಬೆ ಸಹಚರ ದಯಾ ಶಂಕರ್ ಅಗ್ನಿಹೋತ್ರಿ ಹೇಳಿಕೆಯ ಬಳಿಕ ಈ ಬೆಳವಣಿಗೆ ನಡೆದಿದೆ.

ಸಬ್ ಇನ್ಸ್‌ಪೆಕ್ಟರ್‌ಗಳಾದ ಕುನ್ವರ್ಪಲ್ ಹಾಗೂ ಕೃಷ್ಣ ಕುಮಾರ್ ಶರ್ಮಾ ಹಾಗೂ ಕಾನ್ಸ್‌ಸ್ಟೇಬಲ್ ರಾಜೀವ್ ಸಹಿತ ಮೂವರು ಪೊಲೀಸರ ವಿರುದ್ಧ ಪ್ರಾಥಮಿಕ ತನಿಖೆ ನಡೆಸಲಾಗುತ್ತಿದೆ ಎಂದು ಕಾನ್ಪುರ ಎಸ್‌ಎಸ್‌ಪಿ ದಿನೇಶ್ ಕುಮಾರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News