ಕಾರು- ಟ್ರ್ಯಾಕ್ಟರ್ ಅಪಘಾತ: ಯುವಕ ಮೃತ್ಯು, ಮೂವರಿಗೆ ಗಾಯ

Update: 2020-07-12 18:39 GMT

ಯಾದಗಿರಿ, ಜು.12: ತಾಲೂಕಿನ ದೇವತ್ಕಲ್ ಬಳಿಯಲ್ಲಿನ ದೇವಾಪುರ ಮನಗೂಳಿ ರಾಜ್ಯ ಹೆದ್ದಾರಿಯಲ್ಲಿ ಇಂದು ಮದ್ಯಾಹ್ನ ಕಾರು ಮತ್ತು ಟ್ರ್ಯಾಕ್ಟರ್ ಮಧ್ಯೆ ಅಪಘಾತ ಸಂಭವಿಸಿ ವ್ಯಕ್ತಿಯೊಬ್ಬ ಮೃತಪಟ್ಟು, ಇನ್ನುಳಿದ ಮೂವರು ಗಾಯಗೊಂಡಿರುವ ಘಟನೆ ನಡೆದಿದೆ.

ಕಾರು ದೇವಾಪುರ ಕಡೆಯಿಂದ ಹೋಗುತ್ತಿದ್ದು, ಪಕ್ಕದ ತಿರುವಿನಲ್ಲಿ ಬಂದ ಟ್ರ್ಯಾಕ್ಟರ್ ಗುದ್ದಿದ ಪರಿಣಾಮ ಕಾರು ಪಲ್ಟಿಯಾಗಿದೆ. ಇದರಿಂದ ಕಾರಿನಲ್ಲಿದ್ದ ಒಬ್ಬ ವ್ಯಕ್ತಿ ಸ್ಥಳದಲ್ಲಿಯೇ ಮೃತನಾಗಿದ್ದಾನೆ. ಕಾರಿನಲ್ಲಿ ಒಟ್ಟು ಮೂರು ಜನ ಪ್ರಯಾಣಿಸುತ್ತಿದ್ದು, ಇನ್ನುಳಿದ ಇಬ್ಬರಿಗೆ ಮತ್ತು ಟ್ರ್ಯಾಕ್ಟರ್ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ಮೂವರನ್ನು ಸುರಪುರ ತಾಲೂಕು ಆಸ್ಪತ್ರೆಗೆ ಸೇರಿಸಲಾಗಿದೆ.

ಸುಶೀಲ ಚೌಹಾಣ (19)ಮೃತ ವ್ಯಕ್ತಿ. ಗಾಯಾಳುಗಳಾದ ಪ್ರಕಾಶ ಚಂದರ್ ರಾಠೋಡ (28) ಸಂತೋಷ ಚೌಹಾಣ (24) ಸೈದಾಪುರ ಗ್ರಾಮದವರು ಹಾಗು ಟ್ರ್ಯಾಕ್ಟರ್ ಚಾಲಕ ಶರಣಗೌಡ ಮಾಲಿಪಾಟೀಲ (45) ಗೋಡಿಹಾಳ ಗ್ರಾಮದವರಾಗಿದ್ದಾರೆ.

ಸ್ಥಳಕ್ಕೆ ಸುರಪುರ ಠಾಣೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News