ರಾಜ್ಯ ಸರ್ಕಾರಕ್ಕೆ ಒಂದು ವರ್ಷ: ಸಾಧನೆಗಳ ಪುಸ್ತಕ ಬಿಡುಗಡೆ ಮಾಡಿದ ಸಚಿವೆ ಶಶಿಕಲಾ ಜೊಲ್ಲೆ
Update: 2020-07-27 09:12 GMT
ವಿಜಯಪುರ, ಜು.27: ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷವಾದ ಹಿನ್ನೆಲೆ ಸರ್ಕಾರದ ಸಾಧನೆಗಳ ಪುಸ್ತಕವನ್ನು ಸಚಿವೆ ಶಶಿಕಲಾ ಜೊಲ್ಲೆ ಬಿಡುಗಡೆ ಮಾಡಿದರು.
ವಿಜಯಪುರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಜಯಪುರ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಸಿಎಂ ಅವರೊಂದಿಗೆ ಮೊದಲು ಸಂವಾದ ನಡೆಸಿ, ನಂತರ ಪುಸ್ತಕ ಲೋಕಾರ್ಪಣೆ ಮಾಡಿದರು. ಇದೇ ಸಂದರ್ಭದಲ್ಲಿ ವಿಜಯಪುರದ ತುಂಬು ಗರ್ಭಿಣಿಯಾಗಿರುವ ಪದ್ಮಶ್ರೀ ಎಂಬವರು ಸರ್ಕಾರ ಹಾಗೂ ಜಿಲ್ಲಾಡಳಿತದ ಸಹಾಯ ನೆನೆದರು.
ನಾನು ಕೊರೋನ ಪಾಸಿಟಿವ್ ಆಗಿದ್ದೆ. ನನಗೆ ಹೋಂ ಐಸೋಲೇಷನ್ ಗೆ ಅವಕಾಶ ನೀಡಿ ಸೂಕ್ತ ಔಷಧಿ ಹಾಗೂ ಇತರೆ ಸೌಕರ್ಯ ಸರ್ಕಾರ ಒದಗಿಸಿದೆ ಎಂದರು. ಅಲ್ಲದೇ, ಕೊರೋನ ಕಾಟದ ವೇಳೆ ಗರ್ಭಿಣಿಯರಿಗೆ ಸಹಾಯ ಮಾಡುವಂತೆ ಸಿಎಂಗೆ ಪದ್ಮಶ್ರೀ ಮನವಿ ಮಾಡಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಎಸ್ಪಿ ಅನುಪಮ ಅಗರವಾಲ್ ಹಾಜರಿದ್ದರು.