ದಕ್ಷಿಣ ಕಾಶ್ಮೀರದಲ್ಲಿ ಬಿಜೆಪಿ ನಾಯಕನನ್ನು ಗುಂಡಿಟ್ಟು ಕೊಂದ ಉಗ್ರಗಾಮಿಗಳು

Update: 2020-08-06 06:36 GMT

ಶ್ರೀನಗರ, ಆ.6:ಜಮ್ಮು-ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಸರಪಂಚ ಹಾಗೂ ಬಿಜೆಪಿ ನಾಯಕನೊಬ್ಬನನ್ನು ದಕ್ಷಿಣ ಕಾಶ್ಮೀರದ ಅವರ ಮನೆಯ ಹೊರಗಡೆ ಶಂಕಿತ ಉಗ್ರರು ಇಂದು ಬೆಳಗ್ಗೆ ಗುಂಡಿಟ್ಟು ಸಾಯಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶ್ರೀನಗರದಿಂದ 70 ಕಿ.ಮೀ.ದೂರದಲ್ಲಿರುವ ಕುಲ್ಗಾಮ್‌ನಲ್ಲಿ ಸಜಾದ್ ಅಹ್ಮದ್‌ರನ್ನು ಉಗ್ರರು ಗುಂಡಿಟ್ಟು ಹತ್ಯೆಗೈದಿದ್ದಾರೆ. ಅಹ್ಮದ್ ಕುಲ್ಗಾಮ್ನ ಬಿಜೆಪಿಯ ಜಿಲ್ಲಾ ಉಪಾಧ್ಯಕ್ಷನಾಗಿದ್ದರು.

ಇತ್ತೀಚೆಗಿನ ವಾರಗಳಲ್ಲಿ ಬಿಜೆಪಿ ನಾಯಕರ ಮೇಲೆ ನಡೆದಿರುವ ನಾಲ್ಕನೇ ದಾಳಿ ಇದಾಗಿದೆ. ಕಳೆದ ತಿಂಗಳು ಬಂಡಿಪೋರ್ ಜಿಲ್ಲೆಯಲ್ಲಿ ಉಗ್ರರು ಬಿಜೆಪಿಯ ಶೇಕ್ ವಸೀಂ ಬಾರಿ, ಅವರ ತಂದೆ ಹಾಗೂ ಸಹೋದರನನ್ನು ಹತ್ಯೆಗೈದಿದ್ದರು.

ಜೂನ್‌ನಲ್ಲಿ ಉಗ್ರರ ದಾಳಿಗೆ ಕಾಂಗ್ರೆಸ್‌ನ ಸರಪಂಚ ಅಜಯ್ ಭಾರ್ತಿ ಬಲಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News